ಮದ್ದೂರು ಕ್ಷೇತ್ರದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಲಕ್ಷ್ಮಣ್ ಕುಮಾರ್ ಅವರಿಗೆ ಟಿಕೆಟ್ ದೊರೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಹೊಸ ಮುಖ ಸತೀಶ್ ಅವರ ಹೆಸರು ಘೋಷಣೆಯಾಗಿದೆ. ಅರ್ಜಿ ಸಲ್ಲಿಸದ, ಹೆಸರು ಮುನ್ನೆಲೆಯಲ್ಲಿ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಿರುವುದು ಮದ್ದೂರಿನಲ್ಲಿ ಆಶ್ಚರ್ಯ ಸೃಷ್ಟಿಸಿದೆ.