<p><strong>ಬೆಳಗಾವಿ</strong>: ‘ಕೃತಕ ಬುದ್ಧಿಮತ್ತೆಗಿಂತ ಮನುಷ್ಯನ ಶಕ್ತಿಯೇ ಮೇಲು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮೂಲಕತೆಯ ಆತ್ಮ ಮತ್ತು ಅದನ್ನು ಹೇಳುವ ನಿರ್ದೇಶಕನ ದೃಷ್ಟಿಕೋನವೇ ಮುಖ್ಯ. ಜನರ ಬದುಕಿನ ಭಾಗವಾದ ಚಲನಚಿತ್ರವನ್ನು ಸಂವೇದನಾಶೀಲವಾಗಿ ರಚಿಸಬೇಕಿದೆ’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕರೆಕೊಟ್ಟರು.</p><p>ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕವು ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ‘ಕನ್ನಡ ಸಿನಿಮಾ: ಪ್ರಗತಿಪರ ನೆಲೆಗಳ ಸ್ವರೂಪ’ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>‘ಸಾಹಿತ್ಯ ಎಂಬುದು ಸೃಷ್ಟಿಯಾದರೆ, ಸಿನಿಮಾ ಮರುಸೃಷ್ಟಿ. ಬೇರೆ ಬೇರೆ ಕಲಾ ಪ್ರಕಾರ ಒಳಗೊಂಡ ಪ್ರಭಾವಿ ಮಾಧ್ಯಮ ಇದು. ಪ್ರಸ್ತುತ ಕಾಲಘಟ್ಟದಲ್ಲಿ ಪ್ರಗತಿಪರ ವಿಚಾರಧಾರೆಯುಳ್ಳ ಸಿನಿಮಾಗಳು ಬರಬೇಕಿದೆ. ಮುಖ್ಯವಾಹಿನಿ ಅಥವಾ ಪರ್ಯಾಯ ಮಾಧ್ಯಮದ ಸಿನಿಮಾಗಳಿರಲಿ, ಅದರಲ್ಲಿ ಮಾನವೀಯ ಮೌಲ್ಯಗಳು ಅಡಕವಾಗಿರಬೇಕು’ ಎಂದರು. </p><p>‘ಸಿನಿಮಾ ರಚನೆ ಎಂಬುದು ಸಮೂಹ ಪ್ರಯತ್ನ. ಇಲ್ಲಿ ನಿರ್ದೇಶಕನ ಪಾತ್ರ ಮುಖ್ಯವಿದ್ದರೂ, ಪ್ರತಿ ಕಲಾವಿದರು ಮತ್ತು ತಂತ್ರಜ್ಞರ ಪಾತ್ರವನ್ನೂ ಅಲ್ಲಗಳೆಯುವಂತಿಲ್ಲ. ಸಾಹಿತ್ಯ ಮತ್ತು ಸಿನಿಮಾ ಎರಡನ್ನೂ ಹೋಲಿಕೆ ಮಾಡಿದಾಗ, ಸಾಹಿತ್ಯದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಕಂಡುಬರುತ್ತದೆ. ಎಲ್ಲರ ಸಮನ್ವಯದಿಂದ ಸಿನಿಮಾ ಸಿದ್ಧವಾಗುತ್ತದೆ. ಹಾಗಾಗಿ ಸಿನಿಮಾ ಸಿದ್ಧಪಡಿಸುವಿಕೆಯನ್ನು ಪ್ರಜಾಸತ್ತಾತ್ಮಕವಾದ ಒಂದು ಕಲೆಯಾಗಿ ನೋಡಬೇಕಾಗುತ್ತದೆ’ ಎಂದರು.</p><p>‘ಸಿನಿಮಾ ರಂಗದಲ್ಲಿ ಸೃಜನಶೀಲ ವ್ಯಕ್ತಿತ್ವದವರು ಮತ್ತು ಶ್ರಮಿಕರು ಒಟ್ಟಾಗಿ ಕೆಲಸ ಮಾಡುತ್ತಾರೆ. ಈಗ ಕನ್ನಡ ಚಲನಚಿತ್ರಗಳಲ್ಲೂ ಅನೇಕ ಬದಲಾವಣೆ ಕಂಡುಬರುತ್ತಿವೆ. ರಾಜ್ಕುಮಾರ್, ವಿಷ್ಣುವರ್ಧನ ಅವರ ಅನೇಕ ಸಿನಿಮಾಗಳು ಪ್ರಗತಿಪರ ಚಿಂತನೆಗಳಿಂದ ಕೂಡಿದ್ದವು. ಸಾಮಾಜಿಕ ಪಿಡುಗುಗಳ ವಿರುದ್ಧ ಸಂದೇಶ ಸಾರುತ್ತಿದ್ದವು. ಆದರೆ, ಈಗಿನ ಸಿನಿಮಾಗಳಲ್ಲಿ ರೌಡಿಸಂ ಹೆಚ್ಚಾಗಿದೆ. ಅನೇಕ ನಟರು ಮಚ್ಚು ಹಿಡಿದುಕೊಂಡು ಸಿನಿಮಾ ಮಾಡುತ್ತಿದ್ದಾರೆ’ ಎಂದರು.</p><p>‘ಸಾಹಿತ್ಯ ಮತ್ತು ಸಿನಿಮಾ: ಸೃಷ್ಟಿ ಸ್ವರೂಪ’ ಕುರಿತು ನದೀಮ್ ಸನದಿ, ‘ಕನ್ನಡ ಸಿನಿಮಾ: ಪೌರಾಣಿಕ ವಸ್ತುವಿನಲ್ಲಿ ಪ್ರಗತಿಪರ ನೆಲೆ’ ಕುರಿತು ನಿರ್ಮಲಾ ಬಟ್ಟಲ ಉಪನ್ಯಾಸ ನೀಡಿದರು. ವಿಜಯಕುಮಾರ ಎಂ.ಜಿ. ದಿಕ್ಸೂಚಿ ನುಡಿಗಳನ್ನಾಡಿದರು. </p><p>ಡಿ.ಎಸ್. ಚೌಗಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ‘ಕನ್ನಡ ಸಿನಿಮಾ: ಚರಿತ್ರೆಯ ಜನಪರ ಕಟ್ಟುವಿಕೆ’ ಕುರಿತು ವಿನಯ ನಂದಿಹಾಳ, ‘ಕನ್ನಡ ಸಿನಿಮಾ: ಸಾಮಾಜಿಕ ವಸ್ತುವಿನಲ್ಲಿ ಪ್ರಗತಿಪರತೆʼ ಕುರಿತು ಸಂತೋಷ ನಾಯಿಕ ಮಾತನಾಡಿದರು.</p><p>ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕ ಪ್ರೊ.ಯಲ್ಲಪ್ಪ ಹಿಮ್ಮಡಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಕೃತಕ ಬುದ್ಧಿಮತ್ತೆಗಿಂತ ಮನುಷ್ಯನ ಶಕ್ತಿಯೇ ಮೇಲು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮೂಲಕತೆಯ ಆತ್ಮ ಮತ್ತು ಅದನ್ನು ಹೇಳುವ ನಿರ್ದೇಶಕನ ದೃಷ್ಟಿಕೋನವೇ ಮುಖ್ಯ. ಜನರ ಬದುಕಿನ ಭಾಗವಾದ ಚಲನಚಿತ್ರವನ್ನು ಸಂವೇದನಾಶೀಲವಾಗಿ ರಚಿಸಬೇಕಿದೆ’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕರೆಕೊಟ್ಟರು.</p><p>ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕವು ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ‘ಕನ್ನಡ ಸಿನಿಮಾ: ಪ್ರಗತಿಪರ ನೆಲೆಗಳ ಸ್ವರೂಪ’ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>‘ಸಾಹಿತ್ಯ ಎಂಬುದು ಸೃಷ್ಟಿಯಾದರೆ, ಸಿನಿಮಾ ಮರುಸೃಷ್ಟಿ. ಬೇರೆ ಬೇರೆ ಕಲಾ ಪ್ರಕಾರ ಒಳಗೊಂಡ ಪ್ರಭಾವಿ ಮಾಧ್ಯಮ ಇದು. ಪ್ರಸ್ತುತ ಕಾಲಘಟ್ಟದಲ್ಲಿ ಪ್ರಗತಿಪರ ವಿಚಾರಧಾರೆಯುಳ್ಳ ಸಿನಿಮಾಗಳು ಬರಬೇಕಿದೆ. ಮುಖ್ಯವಾಹಿನಿ ಅಥವಾ ಪರ್ಯಾಯ ಮಾಧ್ಯಮದ ಸಿನಿಮಾಗಳಿರಲಿ, ಅದರಲ್ಲಿ ಮಾನವೀಯ ಮೌಲ್ಯಗಳು ಅಡಕವಾಗಿರಬೇಕು’ ಎಂದರು. </p><p>‘ಸಿನಿಮಾ ರಚನೆ ಎಂಬುದು ಸಮೂಹ ಪ್ರಯತ್ನ. ಇಲ್ಲಿ ನಿರ್ದೇಶಕನ ಪಾತ್ರ ಮುಖ್ಯವಿದ್ದರೂ, ಪ್ರತಿ ಕಲಾವಿದರು ಮತ್ತು ತಂತ್ರಜ್ಞರ ಪಾತ್ರವನ್ನೂ ಅಲ್ಲಗಳೆಯುವಂತಿಲ್ಲ. ಸಾಹಿತ್ಯ ಮತ್ತು ಸಿನಿಮಾ ಎರಡನ್ನೂ ಹೋಲಿಕೆ ಮಾಡಿದಾಗ, ಸಾಹಿತ್ಯದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಕಂಡುಬರುತ್ತದೆ. ಎಲ್ಲರ ಸಮನ್ವಯದಿಂದ ಸಿನಿಮಾ ಸಿದ್ಧವಾಗುತ್ತದೆ. ಹಾಗಾಗಿ ಸಿನಿಮಾ ಸಿದ್ಧಪಡಿಸುವಿಕೆಯನ್ನು ಪ್ರಜಾಸತ್ತಾತ್ಮಕವಾದ ಒಂದು ಕಲೆಯಾಗಿ ನೋಡಬೇಕಾಗುತ್ತದೆ’ ಎಂದರು.</p><p>‘ಸಿನಿಮಾ ರಂಗದಲ್ಲಿ ಸೃಜನಶೀಲ ವ್ಯಕ್ತಿತ್ವದವರು ಮತ್ತು ಶ್ರಮಿಕರು ಒಟ್ಟಾಗಿ ಕೆಲಸ ಮಾಡುತ್ತಾರೆ. ಈಗ ಕನ್ನಡ ಚಲನಚಿತ್ರಗಳಲ್ಲೂ ಅನೇಕ ಬದಲಾವಣೆ ಕಂಡುಬರುತ್ತಿವೆ. ರಾಜ್ಕುಮಾರ್, ವಿಷ್ಣುವರ್ಧನ ಅವರ ಅನೇಕ ಸಿನಿಮಾಗಳು ಪ್ರಗತಿಪರ ಚಿಂತನೆಗಳಿಂದ ಕೂಡಿದ್ದವು. ಸಾಮಾಜಿಕ ಪಿಡುಗುಗಳ ವಿರುದ್ಧ ಸಂದೇಶ ಸಾರುತ್ತಿದ್ದವು. ಆದರೆ, ಈಗಿನ ಸಿನಿಮಾಗಳಲ್ಲಿ ರೌಡಿಸಂ ಹೆಚ್ಚಾಗಿದೆ. ಅನೇಕ ನಟರು ಮಚ್ಚು ಹಿಡಿದುಕೊಂಡು ಸಿನಿಮಾ ಮಾಡುತ್ತಿದ್ದಾರೆ’ ಎಂದರು.</p><p>‘ಸಾಹಿತ್ಯ ಮತ್ತು ಸಿನಿಮಾ: ಸೃಷ್ಟಿ ಸ್ವರೂಪ’ ಕುರಿತು ನದೀಮ್ ಸನದಿ, ‘ಕನ್ನಡ ಸಿನಿಮಾ: ಪೌರಾಣಿಕ ವಸ್ತುವಿನಲ್ಲಿ ಪ್ರಗತಿಪರ ನೆಲೆ’ ಕುರಿತು ನಿರ್ಮಲಾ ಬಟ್ಟಲ ಉಪನ್ಯಾಸ ನೀಡಿದರು. ವಿಜಯಕುಮಾರ ಎಂ.ಜಿ. ದಿಕ್ಸೂಚಿ ನುಡಿಗಳನ್ನಾಡಿದರು. </p><p>ಡಿ.ಎಸ್. ಚೌಗಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ‘ಕನ್ನಡ ಸಿನಿಮಾ: ಚರಿತ್ರೆಯ ಜನಪರ ಕಟ್ಟುವಿಕೆ’ ಕುರಿತು ವಿನಯ ನಂದಿಹಾಳ, ‘ಕನ್ನಡ ಸಿನಿಮಾ: ಸಾಮಾಜಿಕ ವಸ್ತುವಿನಲ್ಲಿ ಪ್ರಗತಿಪರತೆʼ ಕುರಿತು ಸಂತೋಷ ನಾಯಿಕ ಮಾತನಾಡಿದರು.</p><p>ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕ ಪ್ರೊ.ಯಲ್ಲಪ್ಪ ಹಿಮ್ಮಡಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>