‘ಏ. 26ರಂದು ಮನೆಯ ಒಳಗೂ ಹೊರಗೂ ತಳಿರು– ತೋರಣಗಳಿಂದ ಅಲಂಕಾರ ಮಾಡಬೇಕು. ಮನೆಯವರೆಲ್ಲರೂ ಸೇರಿ ಇಷ್ಟಲಿಂಗ ಪೂಜೆ ನೆರವೇರಿಸಬೇಕು. ಬಸವೇಶ್ವರ ಪೂಜಾ ವ್ರತವನ್ನು ಸಂಪೂರ್ಣವಾಗಿ ಮಾಡಬೇಕು. ನಂತರ ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಅನುಕೂಲವಿದ್ದರೆ, ಅಕ್ಕ ಪಕ್ಕದವರು ಅಥವಾ ಬಂಧುಗಳಿಗೆ ಇಷ್ಟಾರ್ಥ ನೆರವೇರಲು ಬಸವಾನುಗ್ರಹ (ಉಡಿ ಅಕ್ಕಿ) ಮಾಡಬಹುದು. ಪಕ್ಕದ ಮನೆಗಳಿಗೆ ಸಿಹಿ ಹಂಚಬೇಕು. ಬಡವರಿಗೆ ನೆರವಾಗಬೇಕು. ಸಾಮಾನ್ಯವಾಗಿ ಅಕ್ಷಯ ತೃತೀಯದಂದು ಬಂಗಾರ ಖರೀದಿಸುವ ವಾಡಿಕೆ ಇದೆ. ಆದರೆ, ಈ ಬಾರಿ ಅಂಗಡಿಗಳು ತೆರೆದಿಲ್ಲದ ಕಾರಣ ಬಸವಣ್ಣನವರ ವಚನಗಳನ್ನು ಓದಿ ಪಾಲಿಸಲು ಪ್ರಯತ್ನಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು’ ಎಂದು ತಿಳಿಸಿದ್ದಾರೆ.