ಸುವರ್ಣ ಸೌಧದ ಬಳಿ ಸಮಾವೇಶಕ್ಕೆ ಗುರುತಿಸಿದ ಜಾಗದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಲ್ಲಿ ನೂರು ಎಕರೆಯಷ್ಟು ವಿಶಾಲ ಜಾಗ ಸಿದ್ಧಮಾಡಿದ್ದೇವೆ. ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಎ.ಬಿ.ಪಾಟೀಲ ಅವರು ಜಾಗ ಗುರುತಿಸಿದ್ದಾರೆ. ಹರಿಹರದ ಮಾಜಿ ಶಾಸಕ ಶಿವಂಶಕರ ಅವರು 1000 ಕ್ವಿಂಟಲ್ ಅಕ್ಕಿ ತರಿಸಿದ್ದಾರೆ. ಸಿ.ಸಿ. ಪಾಟೀಲ ಅವರು ಪದಾರ್ಥ ತರಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಕಾಶಪ್ಪನವರ, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ.ಪಾಟೀಲ ಎಲ್ಲರೂ ಸಿದ್ಧತೆ ಮಾಡಿದ್ದಾರೆ. ಸಮಾಜದ ಜನ ಯಾವುದೇ ಹಿಂಜರಿಕೆ ಪಡೆದೇ ಬನ್ನಿ ಕರೆ ನೀಡಿದರು’ ಎಂದರು.
‘ಕನಿಷ್ಠ 20 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ವೇದಿಕೆಗೆ ರಾಣಿ ಚನ್ನಮ್ಮನ ಹೆಸರು, ಮಹಾದ್ವಾರಕ್ಮೆ ಬೆಳವಡಿ ಮಲ್ಲಮ್ಮನ ಹೆಸರು, ಪ್ರದೇಶಕ್ಕೆ ರಾವ್ ಬಹಾದ್ದೂರ ಅರಟಾಳ ರುದ್ರಗೌಡರ ಹೆಸರು ಇಡಲಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜದ ಐದೂ ಪಂಗಡಗಳ ಜನ ಸೇರುವ ಕಾರಣ ‘ವಿರಾಟ ಪಂಚಶಕ್ತಿ’ ಹೋರಾಟ ಎಂದು ಕರೆಯಲಾಗಿದೆ’ ಎಂದರು.