<p><strong>ಬೆಟಗೇರಿ:</strong> ಈ ಶಾಲೆಯಲ್ಲಿ ಮಕ್ಕಳಿಗೆ ನಿತ್ಯವೂ ಹನುಮನ ದರ್ಶನವಾಗುತ್ತಿದೆ. ಇದರಲ್ಲೇನು ವಿಶೇಷ ಅಂತೀರಾ?</p>.<p>ಹೌದು. ಗೋಕಾಕ ತಾಲ್ಲೂಕಿನ ಬೆಟಗೇರಿಯ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ವೀರಾಂಜನೇಯನ ಹೊಸ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಶಾಲೆ ಮಕ್ಕಳು ಮತ್ತು ಶಿಕ್ಷಕರಿಗೆ ನಿತ್ಯವೂ ಹನುಮನು ದರ್ಶನ ನೀಡುತ್ತಿದ್ದಾನೆ.</p>.<p>‘ಈ ಶಾಲೆ ಮುಂದೆ ಇರುವ ಮರಗಳ ಮೇಲೆ ಕುಳಿತಿದ್ದ ಮಂಗಗಳ ಪೈಕಿ ಒಂದು ಆಕಸ್ಮಿಕವಾಗಿ ಪ್ರಾಣ ಬಿಟ್ಟಿತು. ಅದರ ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲೇ ಹನುಮನ ಮೂರ್ತಿ ನಿರ್ಮಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೇವೆ’ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಮೇಶ ಅಳಗುಂಡಿ ಅವರ ಪುತ್ರ ದಿ.ಕಿರಣ ಅಳಗುಂಡಿ ಸ್ಮರಣಾರ್ಥವಾಗಿ, ಸಹೋದರ ಚೇತನ ಅಳಗುಂಡಿ ₹50 ಸಾವಿರ ವೆಚ್ಚದಲ್ಲಿ ವೀರಾಂಜನೇಯನ ಮೂರ್ತಿ ನಿರ್ಮಿಸಿ, ಶಾಲೆಗೆ ಕೊಡುಗೆಯಾಗಿ ಕೊಟ್ಟಿದ್ದಾರೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಹೇಳಿದರು.</p>.<p>‘ಹನುಮಂತ ಜಾಗೃತ ದೇವರು. ಮಕ್ಕಳಲ್ಲಿ ಹನುಮನ ಬಗ್ಗೆ ಭಕ್ತಿ ಬೆಳೆಯಲೆಂದು ಮೂರ್ತಿ ನಿರ್ಮಿಸಿಕೊಟ್ಟಿದ್ದೇನೆ’ ಎನ್ನುತ್ತಾರೆ ಚೇತನ ಅಳಗುಂಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಟಗೇರಿ:</strong> ಈ ಶಾಲೆಯಲ್ಲಿ ಮಕ್ಕಳಿಗೆ ನಿತ್ಯವೂ ಹನುಮನ ದರ್ಶನವಾಗುತ್ತಿದೆ. ಇದರಲ್ಲೇನು ವಿಶೇಷ ಅಂತೀರಾ?</p>.<p>ಹೌದು. ಗೋಕಾಕ ತಾಲ್ಲೂಕಿನ ಬೆಟಗೇರಿಯ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ವೀರಾಂಜನೇಯನ ಹೊಸ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಶಾಲೆ ಮಕ್ಕಳು ಮತ್ತು ಶಿಕ್ಷಕರಿಗೆ ನಿತ್ಯವೂ ಹನುಮನು ದರ್ಶನ ನೀಡುತ್ತಿದ್ದಾನೆ.</p>.<p>‘ಈ ಶಾಲೆ ಮುಂದೆ ಇರುವ ಮರಗಳ ಮೇಲೆ ಕುಳಿತಿದ್ದ ಮಂಗಗಳ ಪೈಕಿ ಒಂದು ಆಕಸ್ಮಿಕವಾಗಿ ಪ್ರಾಣ ಬಿಟ್ಟಿತು. ಅದರ ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲೇ ಹನುಮನ ಮೂರ್ತಿ ನಿರ್ಮಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೇವೆ’ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ರಮೇಶ ಅಳಗುಂಡಿ ಅವರ ಪುತ್ರ ದಿ.ಕಿರಣ ಅಳಗುಂಡಿ ಸ್ಮರಣಾರ್ಥವಾಗಿ, ಸಹೋದರ ಚೇತನ ಅಳಗುಂಡಿ ₹50 ಸಾವಿರ ವೆಚ್ಚದಲ್ಲಿ ವೀರಾಂಜನೇಯನ ಮೂರ್ತಿ ನಿರ್ಮಿಸಿ, ಶಾಲೆಗೆ ಕೊಡುಗೆಯಾಗಿ ಕೊಟ್ಟಿದ್ದಾರೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಹೇಳಿದರು.</p>.<p>‘ಹನುಮಂತ ಜಾಗೃತ ದೇವರು. ಮಕ್ಕಳಲ್ಲಿ ಹನುಮನ ಬಗ್ಗೆ ಭಕ್ತಿ ಬೆಳೆಯಲೆಂದು ಮೂರ್ತಿ ನಿರ್ಮಿಸಿಕೊಟ್ಟಿದ್ದೇನೆ’ ಎನ್ನುತ್ತಾರೆ ಚೇತನ ಅಳಗುಂಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>