<p><strong>ಬೆಳಗಾವಿ</strong>: ಜಿಲ್ಲೆಯ ರಾಜಕಾರಣ ಮತ್ತೊಮ್ಮೆ ಮಗ್ಗಲು ಬದಲಿಸಿದೆ. ಮತ್ತೆ ಕೌಟುಂಬಿಕ ರಾಜಕಾರಣ, ಜಾತಿ ಲೆಕ್ಕಾಚಾರ, ಹಿರಿತನದ ಕಸರತ್ತು, ಜೇಡರಬಲೆಯಂತೆ ಬೆಳೆದ ಆಪ್ತ ವಲಯ... ಹೀಗೆ ಯಾವೆಲ್ಲ ರೂಪಗಳಲ್ಲಿ ಲಾಬಿ ನಡೆಸಬೇಕೋ ಎಲ್ಲವೂ ನಡೆಯುತ್ತಿದೆ ಎಂಬುದು ಸ್ಪಷ್ಟ!</p>.<p>ರಾಜ್ಯ ರಾಜಕಾರಣವನ್ನೇ ಬುಡಮೇಲು ಮಾಡುವಷ್ಟು ಸಾಮರ್ಥ್ಯ ಇರುವ ಈ ಶಕ್ತಿಕೇಂದ್ರದಲ್ಲಿ ಮೇಲಾಟಗಳು ಚುರುಕುಗೊಂಡಿವೆ. ಎರಡೂವರೆ ವರ್ಷಗಳಿಂದಲೂ ಮಂತ್ರಿ ಕುರ್ಚಿಗಾಗಿ ತೆರೆಮರೆ ಕದನ ನಡೆದೇ ಇತ್ತು. ಈಗ ಹೊಸ ಸರ್ಕಾರ ರಚನೆಯಾಗುತ್ತಿದ್ದು, ಅಧಿಕೃತವಾಗಿ ಎಲ್ಲೂ ಕುರ್ಚಿಗಳ ಮೇಲೆ ‘ಟವಲ್’ ಹಾಕಿಕೊಂಡು ಕಾಯುತ್ತಿದ್ದಾರೆ.</p>.<p>18 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11 ಸ್ಥಾನ ಪಡೆದಿದೆ. ಇದರಲ್ಲಿ 7 ಪಳಗಿದ ಹುಲಿಗಳೇ ಇವೆ. ಆಸಿಫ್ ಸೇಠ್, ಬಾಬಾಸಾಹೇವ್ ಪಾಟೀಲ, ವಿಶ್ವಾಸ ವೈದ್ಯ ಹಾಗೂ ಮಹೇಂದ್ರ ತಮ್ಮಣ್ಣವರ ಹೊಸಬರು. ಉಳಿದವರು ಮಂತ್ರಿಗಿರಿ ಬೇಕೆಂದು ಲಾಬಿ ನಡೆಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.</p>.<p>ಲಾಬಿ ನಡೆಸಿದ್ದು ಯಾರು– ಯಾರು?: ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಲಕ್ಷ್ಮಿ ಹೆಬ್ಬಾಳಕರ ಹಾಗೂ ಸತೀಶ ಜಾರಕಿಹೊಳಿ ಅವರು ತಮ್ಮದೇ ಸ್ಥಾನಗಳನ್ನು ಮುಂದೆಯೂ ಉಳಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ. ಇದರ ಮಧ್ಯೆಯೇ ಹಿರಿಯರಾದ ಅಶೋಕ ಪಟ್ಟಣ, ಭರಮಗೌಡ (ರಾಜು) ಕಾಗೆ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ ಕೂಡ ಬೆನ್ನು ಬಿದ್ದಿದ್ದಾರೆ.</p>.<p>ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ ಸವದಿ ಅವರನ್ನು ಅದೇ ಸ್ಥಾನ ನೀಡುವ ಭರವಸೆ ನೀಡಿ ಕಾಂಗ್ರೆಸ್ಗೆ ಕರೆತಂದಿದ್ದು ಇದೇ ಡಿ.ಕೆ.ಶಿವಕುಮಾರ್. ಹೀಗಾಗಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಲಕ್ಷ್ಮಣ ಸವದಿ ಹಠ ಹಿಡಿದಿದ್ದಾರೆ. ಆಸೀಫ್ ಸೇಠ್ ಮೊದಲ ಬಾರಿ ಗೆದ್ದಿದ್ದರೂ ವಯಸ್ಸಿನಲ್ಲಿ ಹಿರಿಯರು ಹಾಗೂ ಅಲ್ಪಸಂಖ್ಯಾತರ ಕೋಟಾದಡಿ ಮಂತ್ರಿ ಪದವಿ ಕೇಳಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಪಾಳೆಯದಿಂದ ಗೊತ್ತಾಗಿದೆ.</p>.<p>ಅನುಭವಿ ರಾಜಕಾರಣಿ, ಸಿದ್ದರಾಮಯ್ಯ ಅವರ ಆಪ್ತರಾದ ಪ್ರಕಾಶ ಹುಕ್ಕೇರಿ ಕೂಡ ಮಂತ್ರಿಯಾಗಿದ್ದವರು. ಈಗ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದರು. ಈ ಹುದ್ದೆ ಕೂಡ ಸಚಿವ ಸ್ಥಾನದಷ್ಟೇ ಪ್ರಭಾವಿ. ಸದ್ಯ ಹೊಸ ಸರ್ಕಾರದಲ್ಲಿ ತಮ್ಮ ಪುತ್ರ ಗಣೇಶಗೆ ಸ್ಥಾನ ಗಿಟ್ಟಿಸಲು ಅವರು ಶ್ರಮ ಹಾಕುತ್ತಿದ್ದಾರೆ ಎಂಬ ಸುದ್ದಿಯೂ ಸುಳಿದಾಡಿದೆ.</p>.<p>ದೊಡ್ಡ ಜಿಲ್ಲೆ ಬೆಳಗಾವಿಗೆ ಕನಿಷ್ಠ 6 ಮಂತ್ರಿ ಸ್ಥಾನ ಬೇಕೇಬೇಕು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಈಗಾಗಲೇ ಪಟ್ಟಿ ಕೂಡ ನೀಡಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ನ ಹಿರಿಯರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.</p>.<p><strong>ಮಾತಿನಂತೆ ನಡೆಯುವರೇ ಸತೀಶ? </strong></p><p>ಒಬ್ಬರಿಗೇ ಒಂದೇ ಸ್ಥಾನ... ಕಳೆದ ವರ್ಷದವರೆಗೂ ಸತೀಶ ಜಾರಕಿಹೊಳಿ ಅವರು ಜಪಿಸುತ್ತಿದ್ದ ಮಂತ್ರವಿದು. ಆಗ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಜತೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿದ್ದರು. ಆಗ ಒಬ್ಬರಿಗೆ ಒಂದೇ ಸ್ಥಾನ ಎಂದು ಪದೇಪದೇ ಹೇಳಿದ್ದ ಸತೀಶ ಜಾರಕಿಹೊಳಿ ಅವರು ಈಗ ತಮ್ಮ ಮಾತಿನ ಮೇಲೆ ನಿಲ್ಲುತ್ತಾರೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅನುಭವ ಪಡೆದ ಸತೀಶ ಅವರಿಗೆ ಈ ಬಾರಿ ಅಧ್ಯಕ್ಷ ಪಟ್ಟ ನೀಡುವುದು ಬಹುತೇಕ ಖಚಿತವಾಗಿದೆ. ಸಿದ್ದರಾಮಯ್ಯ ಅವರಂಥ ಬಲಾಢ್ಯ ಅಹಿಂದ ನಾಯಕರನ್ನು ಕೆಳಗಿಳಿಸಿದ ಮೇಲೆ ಕೆಪಿಸಿಸಿ ನೊಗವನ್ನು ಅಂಥದ್ದೇ ಛಾತಿಯ ನಾಯಕನಿಗೆ ನೀಡಬೇಕು; ಆ ಮೂಲಕ ಅಹಿಂದ ಡ್ಯಾಮೇಜ್ ಸರಿದೂಗಿಸಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಉಪಾಯ. ಹೀಗಾಗಿ ಸತೀಶ ಅವರು ಈ ನೊಗ ಹೊರಲಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಕಚೇರಿಯಿಂದ ಹೊರಬಿದ್ದಿದೆ. ಕೆಪಿಸಿಸಿ ಪಟ್ಟದ ಜತೆಗೆ ಒಂದು ಮಂತ್ರಿ ಪದವಿಯನ್ನೂ ನೀಡಬೇಕು ಎಂದು ಸತೀಶ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎಂಬ ಚರ್ಚೆ ಆಪ್ತವಲಯದಲ್ಲಿ ನಡೆದಿದೆ.</p>.<p><strong>ಮೂರು ತಲೆಮಾರಿನ ರಾಜಕಾರಣಕ್ಕೆ ಮನ್ನಣೆ? </strong></p><p>ಬೈಲಹೊಂಗಲದ ಮಹಾಂತೇಶ ಕೌಜಲಗಿ ನಾಲ್ಕು ಬಾರಿ ವಿಧಾನಸಭೆ ಒಮ್ಮೆ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಇವರ ತಂದೆ ಶಿವಾನಂದ ಕೌಜಲಗಿ ಅವರು ದೇವೇಗೌಡರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಅಜ್ಜ ಎಚ್.ವಿ.ಕೌಜಲಗಿ ಅವರು ಬಿ.ಡಿ.ಜತ್ತಿ ಅವರ ಸರ್ಕಾರದಲ್ಲಿ ಕಂದಾಯ ಇಲಾಖೆ ಮಂತ್ರಿ ಆಗಿದ್ದರು. ಮಹಾಂತೇಶ ಅವರದು ಮೂರನೇ ತಲೆಮಾರು. ಈ ಹಿರಿತನದ ಆಧಾರದ ಮೇಲೆ ಅಥವಾ ಲಿಂಗಾಯತ ಲೆಕ್ಕಾಚಾರದ ಮೇಲೆ ಅವರಿಗೆ ಮಂತ್ರಿ ಕುರ್ಚಿ ಸಿಕ್ಕೇ ಸಿಗುತ್ತದೆ ಎಂಬ ಉತ್ಸಾಹದಲ್ಲಿ ಬೈಲಗಹೊಂಗಲ ಜನರಿದ್ದಾರೆ.</p>.<p>ಸಿದ್ದರಾಮಯ್ಯ ಆಪ್ತರ ಕಸರತ್ತು ರಾಮದುರ್ಗ ಶಾಸಕ ಅಶೋಕ ಪಟ್ಟಣ ಸಿದ್ದರಾಮಯ್ಯ ಅವರ ಖಾಸಾ ಮನುಷ್ಯ. ಮೂರು ಬಾರಿ ಶಾಸಕರಾಗಿರುವ ಪಟ್ಟಣ 2013-18 ಹಾಗೂ 2023ರಿಂದ ಈವರೆಗೆ ವಿಧಾನಸಭೆ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದಾರೆ. ಆದರೂ ಸಚಿವ ಸ್ಥಾನ ಸಿಕ್ಕಿಲ್ಲ. ಹಿರಿತನದ ಆಧಾರದ ಮೇಲೆ ಇವರು ಕೂಡ ತಮ್ಮನ್ನು ಮಂತ್ರಿ ಮಾಡುವಂತೆ ಹೈಕಮಾಂಡ್ ಮುಂದೆ ಕೇಳಿಕೊಂಡಿದ್ದಾರೆ. ಅಶೋಕ ಪಟ್ಟಣ ತಂದೆ ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಹಾಗೂ ತಾಯಿ ಶಾರದಮ್ಮ ಇಬ್ಬರು ಕೂಡ ಶಾಸಕರಾಗಿದ್ದರು. ಎರಡು ತಲೆಮಾರಿಗಳನ್ನು ಪರಿಗಣಿಸಿ ಮಂತ್ರಿ ಪದವಿ ನೀಡಬೇಕು ಎಂದು ಅವರ ಆಪ್ತರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಜಿಲ್ಲೆಯ ರಾಜಕಾರಣ ಮತ್ತೊಮ್ಮೆ ಮಗ್ಗಲು ಬದಲಿಸಿದೆ. ಮತ್ತೆ ಕೌಟುಂಬಿಕ ರಾಜಕಾರಣ, ಜಾತಿ ಲೆಕ್ಕಾಚಾರ, ಹಿರಿತನದ ಕಸರತ್ತು, ಜೇಡರಬಲೆಯಂತೆ ಬೆಳೆದ ಆಪ್ತ ವಲಯ... ಹೀಗೆ ಯಾವೆಲ್ಲ ರೂಪಗಳಲ್ಲಿ ಲಾಬಿ ನಡೆಸಬೇಕೋ ಎಲ್ಲವೂ ನಡೆಯುತ್ತಿದೆ ಎಂಬುದು ಸ್ಪಷ್ಟ!</p>.<p>ರಾಜ್ಯ ರಾಜಕಾರಣವನ್ನೇ ಬುಡಮೇಲು ಮಾಡುವಷ್ಟು ಸಾಮರ್ಥ್ಯ ಇರುವ ಈ ಶಕ್ತಿಕೇಂದ್ರದಲ್ಲಿ ಮೇಲಾಟಗಳು ಚುರುಕುಗೊಂಡಿವೆ. ಎರಡೂವರೆ ವರ್ಷಗಳಿಂದಲೂ ಮಂತ್ರಿ ಕುರ್ಚಿಗಾಗಿ ತೆರೆಮರೆ ಕದನ ನಡೆದೇ ಇತ್ತು. ಈಗ ಹೊಸ ಸರ್ಕಾರ ರಚನೆಯಾಗುತ್ತಿದ್ದು, ಅಧಿಕೃತವಾಗಿ ಎಲ್ಲೂ ಕುರ್ಚಿಗಳ ಮೇಲೆ ‘ಟವಲ್’ ಹಾಕಿಕೊಂಡು ಕಾಯುತ್ತಿದ್ದಾರೆ.</p>.<p>18 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11 ಸ್ಥಾನ ಪಡೆದಿದೆ. ಇದರಲ್ಲಿ 7 ಪಳಗಿದ ಹುಲಿಗಳೇ ಇವೆ. ಆಸಿಫ್ ಸೇಠ್, ಬಾಬಾಸಾಹೇವ್ ಪಾಟೀಲ, ವಿಶ್ವಾಸ ವೈದ್ಯ ಹಾಗೂ ಮಹೇಂದ್ರ ತಮ್ಮಣ್ಣವರ ಹೊಸಬರು. ಉಳಿದವರು ಮಂತ್ರಿಗಿರಿ ಬೇಕೆಂದು ಲಾಬಿ ನಡೆಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.</p>.<p>ಲಾಬಿ ನಡೆಸಿದ್ದು ಯಾರು– ಯಾರು?: ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಲಕ್ಷ್ಮಿ ಹೆಬ್ಬಾಳಕರ ಹಾಗೂ ಸತೀಶ ಜಾರಕಿಹೊಳಿ ಅವರು ತಮ್ಮದೇ ಸ್ಥಾನಗಳನ್ನು ಮುಂದೆಯೂ ಉಳಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ. ಇದರ ಮಧ್ಯೆಯೇ ಹಿರಿಯರಾದ ಅಶೋಕ ಪಟ್ಟಣ, ಭರಮಗೌಡ (ರಾಜು) ಕಾಗೆ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ ಕೂಡ ಬೆನ್ನು ಬಿದ್ದಿದ್ದಾರೆ.</p>.<p>ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ ಸವದಿ ಅವರನ್ನು ಅದೇ ಸ್ಥಾನ ನೀಡುವ ಭರವಸೆ ನೀಡಿ ಕಾಂಗ್ರೆಸ್ಗೆ ಕರೆತಂದಿದ್ದು ಇದೇ ಡಿ.ಕೆ.ಶಿವಕುಮಾರ್. ಹೀಗಾಗಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಲಕ್ಷ್ಮಣ ಸವದಿ ಹಠ ಹಿಡಿದಿದ್ದಾರೆ. ಆಸೀಫ್ ಸೇಠ್ ಮೊದಲ ಬಾರಿ ಗೆದ್ದಿದ್ದರೂ ವಯಸ್ಸಿನಲ್ಲಿ ಹಿರಿಯರು ಹಾಗೂ ಅಲ್ಪಸಂಖ್ಯಾತರ ಕೋಟಾದಡಿ ಮಂತ್ರಿ ಪದವಿ ಕೇಳಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಪಾಳೆಯದಿಂದ ಗೊತ್ತಾಗಿದೆ.</p>.<p>ಅನುಭವಿ ರಾಜಕಾರಣಿ, ಸಿದ್ದರಾಮಯ್ಯ ಅವರ ಆಪ್ತರಾದ ಪ್ರಕಾಶ ಹುಕ್ಕೇರಿ ಕೂಡ ಮಂತ್ರಿಯಾಗಿದ್ದವರು. ಈಗ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದರು. ಈ ಹುದ್ದೆ ಕೂಡ ಸಚಿವ ಸ್ಥಾನದಷ್ಟೇ ಪ್ರಭಾವಿ. ಸದ್ಯ ಹೊಸ ಸರ್ಕಾರದಲ್ಲಿ ತಮ್ಮ ಪುತ್ರ ಗಣೇಶಗೆ ಸ್ಥಾನ ಗಿಟ್ಟಿಸಲು ಅವರು ಶ್ರಮ ಹಾಕುತ್ತಿದ್ದಾರೆ ಎಂಬ ಸುದ್ದಿಯೂ ಸುಳಿದಾಡಿದೆ.</p>.<p>ದೊಡ್ಡ ಜಿಲ್ಲೆ ಬೆಳಗಾವಿಗೆ ಕನಿಷ್ಠ 6 ಮಂತ್ರಿ ಸ್ಥಾನ ಬೇಕೇಬೇಕು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಈಗಾಗಲೇ ಪಟ್ಟಿ ಕೂಡ ನೀಡಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ನ ಹಿರಿಯರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.</p>.<p><strong>ಮಾತಿನಂತೆ ನಡೆಯುವರೇ ಸತೀಶ? </strong></p><p>ಒಬ್ಬರಿಗೇ ಒಂದೇ ಸ್ಥಾನ... ಕಳೆದ ವರ್ಷದವರೆಗೂ ಸತೀಶ ಜಾರಕಿಹೊಳಿ ಅವರು ಜಪಿಸುತ್ತಿದ್ದ ಮಂತ್ರವಿದು. ಆಗ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಜತೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿದ್ದರು. ಆಗ ಒಬ್ಬರಿಗೆ ಒಂದೇ ಸ್ಥಾನ ಎಂದು ಪದೇಪದೇ ಹೇಳಿದ್ದ ಸತೀಶ ಜಾರಕಿಹೊಳಿ ಅವರು ಈಗ ತಮ್ಮ ಮಾತಿನ ಮೇಲೆ ನಿಲ್ಲುತ್ತಾರೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅನುಭವ ಪಡೆದ ಸತೀಶ ಅವರಿಗೆ ಈ ಬಾರಿ ಅಧ್ಯಕ್ಷ ಪಟ್ಟ ನೀಡುವುದು ಬಹುತೇಕ ಖಚಿತವಾಗಿದೆ. ಸಿದ್ದರಾಮಯ್ಯ ಅವರಂಥ ಬಲಾಢ್ಯ ಅಹಿಂದ ನಾಯಕರನ್ನು ಕೆಳಗಿಳಿಸಿದ ಮೇಲೆ ಕೆಪಿಸಿಸಿ ನೊಗವನ್ನು ಅಂಥದ್ದೇ ಛಾತಿಯ ನಾಯಕನಿಗೆ ನೀಡಬೇಕು; ಆ ಮೂಲಕ ಅಹಿಂದ ಡ್ಯಾಮೇಜ್ ಸರಿದೂಗಿಸಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಉಪಾಯ. ಹೀಗಾಗಿ ಸತೀಶ ಅವರು ಈ ನೊಗ ಹೊರಲಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಕಚೇರಿಯಿಂದ ಹೊರಬಿದ್ದಿದೆ. ಕೆಪಿಸಿಸಿ ಪಟ್ಟದ ಜತೆಗೆ ಒಂದು ಮಂತ್ರಿ ಪದವಿಯನ್ನೂ ನೀಡಬೇಕು ಎಂದು ಸತೀಶ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎಂಬ ಚರ್ಚೆ ಆಪ್ತವಲಯದಲ್ಲಿ ನಡೆದಿದೆ.</p>.<p><strong>ಮೂರು ತಲೆಮಾರಿನ ರಾಜಕಾರಣಕ್ಕೆ ಮನ್ನಣೆ? </strong></p><p>ಬೈಲಹೊಂಗಲದ ಮಹಾಂತೇಶ ಕೌಜಲಗಿ ನಾಲ್ಕು ಬಾರಿ ವಿಧಾನಸಭೆ ಒಮ್ಮೆ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಇವರ ತಂದೆ ಶಿವಾನಂದ ಕೌಜಲಗಿ ಅವರು ದೇವೇಗೌಡರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಅಜ್ಜ ಎಚ್.ವಿ.ಕೌಜಲಗಿ ಅವರು ಬಿ.ಡಿ.ಜತ್ತಿ ಅವರ ಸರ್ಕಾರದಲ್ಲಿ ಕಂದಾಯ ಇಲಾಖೆ ಮಂತ್ರಿ ಆಗಿದ್ದರು. ಮಹಾಂತೇಶ ಅವರದು ಮೂರನೇ ತಲೆಮಾರು. ಈ ಹಿರಿತನದ ಆಧಾರದ ಮೇಲೆ ಅಥವಾ ಲಿಂಗಾಯತ ಲೆಕ್ಕಾಚಾರದ ಮೇಲೆ ಅವರಿಗೆ ಮಂತ್ರಿ ಕುರ್ಚಿ ಸಿಕ್ಕೇ ಸಿಗುತ್ತದೆ ಎಂಬ ಉತ್ಸಾಹದಲ್ಲಿ ಬೈಲಗಹೊಂಗಲ ಜನರಿದ್ದಾರೆ.</p>.<p>ಸಿದ್ದರಾಮಯ್ಯ ಆಪ್ತರ ಕಸರತ್ತು ರಾಮದುರ್ಗ ಶಾಸಕ ಅಶೋಕ ಪಟ್ಟಣ ಸಿದ್ದರಾಮಯ್ಯ ಅವರ ಖಾಸಾ ಮನುಷ್ಯ. ಮೂರು ಬಾರಿ ಶಾಸಕರಾಗಿರುವ ಪಟ್ಟಣ 2013-18 ಹಾಗೂ 2023ರಿಂದ ಈವರೆಗೆ ವಿಧಾನಸಭೆ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದಾರೆ. ಆದರೂ ಸಚಿವ ಸ್ಥಾನ ಸಿಕ್ಕಿಲ್ಲ. ಹಿರಿತನದ ಆಧಾರದ ಮೇಲೆ ಇವರು ಕೂಡ ತಮ್ಮನ್ನು ಮಂತ್ರಿ ಮಾಡುವಂತೆ ಹೈಕಮಾಂಡ್ ಮುಂದೆ ಕೇಳಿಕೊಂಡಿದ್ದಾರೆ. ಅಶೋಕ ಪಟ್ಟಣ ತಂದೆ ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಹಾಗೂ ತಾಯಿ ಶಾರದಮ್ಮ ಇಬ್ಬರು ಕೂಡ ಶಾಸಕರಾಗಿದ್ದರು. ಎರಡು ತಲೆಮಾರಿಗಳನ್ನು ಪರಿಗಣಿಸಿ ಮಂತ್ರಿ ಪದವಿ ನೀಡಬೇಕು ಎಂದು ಅವರ ಆಪ್ತರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>