<p><strong>ಬೆಳಗಾವಿ</strong>: ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರಗಳ ತಿಕ್ಕಾಟದ ನಡುವೆ ಬೆಳಗಾವಿಗೆ ‘ಸಿಟೀಸ್ 2.0’ ಯೋಜನೆ ಕೈ ತಪ್ಪುವ ಭೀದಿ ಎದುರಾಗಿದೆ. ಸ್ಮಾರ್ಟ್ಸಿಟಿಯ ಸ್ವಚ್ಛತೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಆರ್ಥಿಕ ಉತ್ತೇಜನ ನೀಡಲು ಈ ಯೋಜನೆ ಅತ್ಯಂತ ಪ್ರಮುಖವಾಗಿತ್ತು. ಆದರೆ, ಪ್ರತಿಷ್ಠೆಯ ಕಾರಣ ಮಹತ್ವಾಕಾಂಕ್ಷಿ ಯೋಜನೆ ಕೈಜಾರುವ ಹಂತ ತಲುಪಿದೆ.</p>.<p>ಈ ಯೋಜನೆಯಲ್ಲಿ ನಗರಕ್ಕೆ ₹135 ಕೋಟಿ ಅನುದಾನ ನಿಗದಿಯಾಗಿದೆ. ಕೇಂದ್ರ ಸರ್ಕಾರ ಶೇ 40, ರಾಜ್ಯ ಸರ್ಕಾರ ಶೇ 40 ಹಾಗೂ ಮಹಾನಗರ ಪಾಲಿಕೆ ಶೇ 20ರಷ್ಟು ಪಾಲು ನೀಡಬೇಕು. ಕೇಂದ್ರದಿಂದ ಯೋಜನೆ ಘೋಷಣೆಯಾಗಿ ಈಗಾಗಲೇ ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ಅನುದಾನವೂ ಬಂದಿದೆ. ಮಹಾನಗರ ಪಾಲಿಕೆಯೂ ತನ್ನ ಪಾಲಿನ ₹29 ಕೋಟಿ ಕೊಡಲು ಸಿದ್ಧವಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ತನ್ನ ಪಾಲಿನ ಶೇ 40 ಅನುದಾನ ನೀಡಲು ಸಿದ್ಧವಿಲ್ಲ. ತನ್ನ ಪಾಲಿನ ಹಣವನ್ನು ರಾಜ್ಯ ಹಣಕಾಸು ಆಯೋಗದ ಅನುದಾನದಿಂದಲೇ ಪಾಲಿಕೆ ಭರಿಸಬೇಕು ಎಂಬ ಉತ್ತರ ಪಾಲಿಕೆ ಅಧಿಕಾರಿಗಳಿಗೆ ಸಿಕ್ಕಿದೆ.</p>.<p>ಇದೇ ವಿಚಾರವಾಗಿ ಈಚೆಗೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡಿದ್ದರು.</p>.<p>ತೆರೆ ಹಿಂದೆ ಏನೇನು ನಡೆದಿದೆ?: ನಗರಗಳಲ್ಲಿ ವಲಯ ಆರ್ಥಿಕತೆ ಉತ್ತೇಜಿಸುವುದು, ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಹಾಗೂ ನವೀನ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2023ರ ನವೆಂಬರ್ನಲ್ಲಿ ಆರಂಭಿಸಿದ ಸಿಟೀಸ್ 2.0 (City Investments to Innovate, Integrate and Sustain) ಯೋಜನೆ ಜಾರಿಗೆ ತಂದಿದೆ.</p>.<p>2024ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಜ್ಯೂರಿ ಮುಂದೆ ‘ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮತ್ತು ಸ್ಥಿರತೆಯ ಯೋಜನೆ ಜಾರಿಗೆ ದೃಷ್ಟಿಪಥ (ವೀಸ್ವಾಸ್)’ ಎಂಬ ಪ್ರಸ್ತಾವವನ್ನು ಮಂಡಿಸಿದ ಬಳಿಕ ಬೆಳಗಾವಿಗೆ ಈ ಅವಕಾಶ ದೊರಕಿತ್ತು.</p>.<p>ಗರಿಷ್ಠ ₹165.35 ಕೋಟಿ ವೆಚ್ಚದ ಯೋಜನೆಯಲ್ಲಿ ಸುಮಾರು ₹75 ಕೋಟಿ ಕೇಂದ್ರ ಅನುದಾನವಾಗಿದ್ದು, ಮೊದಲ ಕಂತಿನಲ್ಲಿ ₹7.5 ಕೋಟಿ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಹಣ ನೀಡದ ಕಾರಣ ರಾಜಕೀಯ ತಿರುವು ಪಡೆದುಕೊಂಡಿದೆ.</p>.<p>ಜತೆಗೆ, ಸ್ಮಾರ್ಟ್ಸಿಟಿ ಲಿಮಿಟೆಡ್ನ ಕ್ರಮಬದ್ಧ ರೂಪುರೇಷೆ ಇಲ್ಲದಿರುವುದೂ ಯೋಜನೆಗೆ ಅಡ್ಡಿಯಾಗಿದೆ. ಮೂಲ ಪ್ರಸ್ತಾವದ ಕೆಲವು ಅಂಶಗಳನ್ನು ಕೇಂದ್ರ ತಿರಸ್ಕರಿಸಿದ್ದರಿಂದ ಹೊಸ ಪ್ರಸ್ತಾವಕ್ಕೆ ಅನುಮೋದನೆ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ.</p>.<p>ಪರಿಸರ ಹಾಗೂ ಸಾಮಾಜಿಕ ಪರಿಣಾಮ ಮೌಲ್ಯಮಾಪನ ನಡೆಸುವ ಸಲಹಾ ಸಂಸ್ಥೆ ನೇಮಕಾತಿ ವಿಳಂಬವಾಗಿರುವುದೂ ಯೋಜನೆಗೆ ಮತ್ತೊಂದು ಅಡ್ಡಿಯಾಗಿದೆ. ಟೆಂಡರ್ ಪ್ರಕ್ರಿಯೆಯನ್ನೂ ಹಲವು ಬಾರಿ ಪುನರಾವರ್ತಿಸಲಾಗಿದೆ. ಟೆಂಡರ್ ರದ್ದುಪಡಿಸಿದ ಕ್ರಮವನ್ನು ಪ್ರಶ್ನಿಸಿ ಒಂದು ಸಲಹಾ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. </p>.<p>ಈ ಎಲ್ಲ ಗೊಂದಲಗಳ ನಡುವೆ ಯೋಜನಾ ವೆಚ್ಚವನ್ನು ಕೇವಲ ₹75 ಕೋಟಿಗೆ ಇಳಿಸಿ, ಕೇಂದ್ರ ಅನುದಾನ ಹಾಗೂ ಪಾಲಿಕೆಯ ಹಣದಲ್ಲೇ ಕಾಮಗಾರಿ ಮುಗಿಸಲು ಸಾಧ್ಯವೇ ಎಂಬುದನ್ನೂ ಮಹಾನಗರ ಪಾಲಿಕೆ ಆಡಳಿತ ಮಂಡಳಿ ಪರಿಗಣಿಸಿದೆ.</p>.<div><blockquote>ಶಾಸಕ ಆಸಿಫ್ ಸೇಠ್ ಈ ಅನುದಾನಕ್ಕೆ ಕಾಳಜಿ ತೋರಬೇಕು. ಅವರದೇ ಸರ್ಕಾರವಿದ್ದು ಮುಂದಾಳತ್ವ ವಹಿಸಿ ಸರ್ಕಾರದ ಪಾಲನ್ನು ತರಿಸಿಕೊಳ್ಳಲಿ.</blockquote><span class="attribution">-ಅಭಯ ಪಾಟೀಲ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರಗಳ ತಿಕ್ಕಾಟದ ನಡುವೆ ಬೆಳಗಾವಿಗೆ ‘ಸಿಟೀಸ್ 2.0’ ಯೋಜನೆ ಕೈ ತಪ್ಪುವ ಭೀದಿ ಎದುರಾಗಿದೆ. ಸ್ಮಾರ್ಟ್ಸಿಟಿಯ ಸ್ವಚ್ಛತೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಆರ್ಥಿಕ ಉತ್ತೇಜನ ನೀಡಲು ಈ ಯೋಜನೆ ಅತ್ಯಂತ ಪ್ರಮುಖವಾಗಿತ್ತು. ಆದರೆ, ಪ್ರತಿಷ್ಠೆಯ ಕಾರಣ ಮಹತ್ವಾಕಾಂಕ್ಷಿ ಯೋಜನೆ ಕೈಜಾರುವ ಹಂತ ತಲುಪಿದೆ.</p>.<p>ಈ ಯೋಜನೆಯಲ್ಲಿ ನಗರಕ್ಕೆ ₹135 ಕೋಟಿ ಅನುದಾನ ನಿಗದಿಯಾಗಿದೆ. ಕೇಂದ್ರ ಸರ್ಕಾರ ಶೇ 40, ರಾಜ್ಯ ಸರ್ಕಾರ ಶೇ 40 ಹಾಗೂ ಮಹಾನಗರ ಪಾಲಿಕೆ ಶೇ 20ರಷ್ಟು ಪಾಲು ನೀಡಬೇಕು. ಕೇಂದ್ರದಿಂದ ಯೋಜನೆ ಘೋಷಣೆಯಾಗಿ ಈಗಾಗಲೇ ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ಅನುದಾನವೂ ಬಂದಿದೆ. ಮಹಾನಗರ ಪಾಲಿಕೆಯೂ ತನ್ನ ಪಾಲಿನ ₹29 ಕೋಟಿ ಕೊಡಲು ಸಿದ್ಧವಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ತನ್ನ ಪಾಲಿನ ಶೇ 40 ಅನುದಾನ ನೀಡಲು ಸಿದ್ಧವಿಲ್ಲ. ತನ್ನ ಪಾಲಿನ ಹಣವನ್ನು ರಾಜ್ಯ ಹಣಕಾಸು ಆಯೋಗದ ಅನುದಾನದಿಂದಲೇ ಪಾಲಿಕೆ ಭರಿಸಬೇಕು ಎಂಬ ಉತ್ತರ ಪಾಲಿಕೆ ಅಧಿಕಾರಿಗಳಿಗೆ ಸಿಕ್ಕಿದೆ.</p>.<p>ಇದೇ ವಿಚಾರವಾಗಿ ಈಚೆಗೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡಿದ್ದರು.</p>.<p>ತೆರೆ ಹಿಂದೆ ಏನೇನು ನಡೆದಿದೆ?: ನಗರಗಳಲ್ಲಿ ವಲಯ ಆರ್ಥಿಕತೆ ಉತ್ತೇಜಿಸುವುದು, ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಹಾಗೂ ನವೀನ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2023ರ ನವೆಂಬರ್ನಲ್ಲಿ ಆರಂಭಿಸಿದ ಸಿಟೀಸ್ 2.0 (City Investments to Innovate, Integrate and Sustain) ಯೋಜನೆ ಜಾರಿಗೆ ತಂದಿದೆ.</p>.<p>2024ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಜ್ಯೂರಿ ಮುಂದೆ ‘ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮತ್ತು ಸ್ಥಿರತೆಯ ಯೋಜನೆ ಜಾರಿಗೆ ದೃಷ್ಟಿಪಥ (ವೀಸ್ವಾಸ್)’ ಎಂಬ ಪ್ರಸ್ತಾವವನ್ನು ಮಂಡಿಸಿದ ಬಳಿಕ ಬೆಳಗಾವಿಗೆ ಈ ಅವಕಾಶ ದೊರಕಿತ್ತು.</p>.<p>ಗರಿಷ್ಠ ₹165.35 ಕೋಟಿ ವೆಚ್ಚದ ಯೋಜನೆಯಲ್ಲಿ ಸುಮಾರು ₹75 ಕೋಟಿ ಕೇಂದ್ರ ಅನುದಾನವಾಗಿದ್ದು, ಮೊದಲ ಕಂತಿನಲ್ಲಿ ₹7.5 ಕೋಟಿ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಹಣ ನೀಡದ ಕಾರಣ ರಾಜಕೀಯ ತಿರುವು ಪಡೆದುಕೊಂಡಿದೆ.</p>.<p>ಜತೆಗೆ, ಸ್ಮಾರ್ಟ್ಸಿಟಿ ಲಿಮಿಟೆಡ್ನ ಕ್ರಮಬದ್ಧ ರೂಪುರೇಷೆ ಇಲ್ಲದಿರುವುದೂ ಯೋಜನೆಗೆ ಅಡ್ಡಿಯಾಗಿದೆ. ಮೂಲ ಪ್ರಸ್ತಾವದ ಕೆಲವು ಅಂಶಗಳನ್ನು ಕೇಂದ್ರ ತಿರಸ್ಕರಿಸಿದ್ದರಿಂದ ಹೊಸ ಪ್ರಸ್ತಾವಕ್ಕೆ ಅನುಮೋದನೆ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ.</p>.<p>ಪರಿಸರ ಹಾಗೂ ಸಾಮಾಜಿಕ ಪರಿಣಾಮ ಮೌಲ್ಯಮಾಪನ ನಡೆಸುವ ಸಲಹಾ ಸಂಸ್ಥೆ ನೇಮಕಾತಿ ವಿಳಂಬವಾಗಿರುವುದೂ ಯೋಜನೆಗೆ ಮತ್ತೊಂದು ಅಡ್ಡಿಯಾಗಿದೆ. ಟೆಂಡರ್ ಪ್ರಕ್ರಿಯೆಯನ್ನೂ ಹಲವು ಬಾರಿ ಪುನರಾವರ್ತಿಸಲಾಗಿದೆ. ಟೆಂಡರ್ ರದ್ದುಪಡಿಸಿದ ಕ್ರಮವನ್ನು ಪ್ರಶ್ನಿಸಿ ಒಂದು ಸಲಹಾ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. </p>.<p>ಈ ಎಲ್ಲ ಗೊಂದಲಗಳ ನಡುವೆ ಯೋಜನಾ ವೆಚ್ಚವನ್ನು ಕೇವಲ ₹75 ಕೋಟಿಗೆ ಇಳಿಸಿ, ಕೇಂದ್ರ ಅನುದಾನ ಹಾಗೂ ಪಾಲಿಕೆಯ ಹಣದಲ್ಲೇ ಕಾಮಗಾರಿ ಮುಗಿಸಲು ಸಾಧ್ಯವೇ ಎಂಬುದನ್ನೂ ಮಹಾನಗರ ಪಾಲಿಕೆ ಆಡಳಿತ ಮಂಡಳಿ ಪರಿಗಣಿಸಿದೆ.</p>.<div><blockquote>ಶಾಸಕ ಆಸಿಫ್ ಸೇಠ್ ಈ ಅನುದಾನಕ್ಕೆ ಕಾಳಜಿ ತೋರಬೇಕು. ಅವರದೇ ಸರ್ಕಾರವಿದ್ದು ಮುಂದಾಳತ್ವ ವಹಿಸಿ ಸರ್ಕಾರದ ಪಾಲನ್ನು ತರಿಸಿಕೊಳ್ಳಲಿ.</blockquote><span class="attribution">-ಅಭಯ ಪಾಟೀಲ, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>