<p><strong>ಬೆಳಗಾವಿ:</strong> ಬೆಳಗಾವಿ ನಗರ ಹಾಗೂ ತಾಲ್ಲೂಕಿನ ಸುತ್ತಮುತ್ತ ಮಂಗಳವಾರ ಸಂಜೆ ಒಂದು ತಾಸಿಗೂ ಹೆಚ್ಚು ಸಮಯ ಧಾರಾಕಾರ ಮಳೆ ಸುರಿಯಿತು. ಸಿಡಿಲು, ಗುಡುಗಿನ ಅಬ್ಬರದ ಜತೆಗೆ ದೊಡ್ಡ ಪ್ರಮಾಣದ ಆಲಿಕಲ್ಲುಗಳೂ ಬಿದ್ದವು.</p><p>ಮೂರು ದಿನಗಳ ಹಿಂದೆ ಸುರಿದಿದ್ದ ಮಳೆ ತುಸು ಬಿಡುವು ನೀಡಿತ್ತು. ಮಂಗಳವಾರ ಬೆಳಿಗ್ಗೆಯಿಂದ ಉರಿಬಿಸಿಲು ಇದ್ದರೂ ಸಂಜೆಗೆ ಏಕಾಏಕಿ ಮಳೆ ಸುರಿಯಿತು. ನಗರದ ರಸ್ತೆಗಳೆಲ್ಲ ಹೊಳೆಯಂತೆ ಭಾಸವಾದವು. ಕಿರಿದಾದ ರಸ್ತೆಗಳಲ್ಲಿ ವಾಹನಗಳು ಸಾಗದೇ ನಿಂತಲ್ಲೇ ನಿಂತವು.</p><p>ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೂ ಸೋರಿಕೆ ಉಂಟಾಗಿ, ಜಿಲ್ಲಾಧಿಕಾರಿ ಅವರ ಕೊಠಡಿಗೂ ರಾಡಿ ಮಿಶ್ರಿತ ನೀರು ನುಗ್ಗಿತು. ಕಚೇರಿಯ ಸಿಬ್ಬಂದಿ ನೀರನ್ನು ಹೊರಹಾಕಲು ಶ್ರಮಪಡಬೇಕಾಯಿತು.</p><p>ಸದಾಶಿವ ನಗರ, ಮಹಾಂತೇಶ ನಗರ, ಸಹ್ಯಾದ್ರಿ ನಗರ, ಆಜಂ ನಗರ, ಶಾಹೂ ಮಹಾರಾಜ ನಗರ, ಶಿವಾಜಿ ನಗರ, ವಡಗಾವಿ, ಶಹಾಪುರ, ಹಿಂಡಲಗಾ, ಕಾಕತಿ ವೇಸ್, ಕಾಲೇಜು ರಸ್ತೆ ಸೇರಿದಂತೆ ಎಲ್ಲ ಪ್ರದೇಶದ ರಸ್ತೆಗಳಲ್ಲಿ ಅಲ್ಲಲ್ಲಿ ಮೊಣಕಾಲು ಮುಳುಗುವಷ್ಟು ನೀರಿ ಕಟ್ಟಿಕೊಂಡಿತು. ಸಂಜೆ 6ರ ಸುಮಾರಿಗೆ ಮಳೆ ನಿಂತ ಮೇಲೆ ರಸ್ತೆ ಮೇಲಿನ ನೀರು ತೆರವಾಯಿತು.</p><p>ಜಿಲ್ಲೆಯ ಖಾನಾಪುರ, ಯರಗಟ್ಟಿ, ಸವದತ್ತಿ, ಚಿಕ್ಕೋಡಿ, ಗೋಕಾಕ ಸುತ್ತಲೂ ಸಾಧಾರಣ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಬೆಳಗಾವಿ ನಗರ ಹಾಗೂ ತಾಲ್ಲೂಕಿನ ಸುತ್ತಮುತ್ತ ಮಂಗಳವಾರ ಸಂಜೆ ಒಂದು ತಾಸಿಗೂ ಹೆಚ್ಚು ಸಮಯ ಧಾರಾಕಾರ ಮಳೆ ಸುರಿಯಿತು. ಸಿಡಿಲು, ಗುಡುಗಿನ ಅಬ್ಬರದ ಜತೆಗೆ ದೊಡ್ಡ ಪ್ರಮಾಣದ ಆಲಿಕಲ್ಲುಗಳೂ ಬಿದ್ದವು.</p><p>ಮೂರು ದಿನಗಳ ಹಿಂದೆ ಸುರಿದಿದ್ದ ಮಳೆ ತುಸು ಬಿಡುವು ನೀಡಿತ್ತು. ಮಂಗಳವಾರ ಬೆಳಿಗ್ಗೆಯಿಂದ ಉರಿಬಿಸಿಲು ಇದ್ದರೂ ಸಂಜೆಗೆ ಏಕಾಏಕಿ ಮಳೆ ಸುರಿಯಿತು. ನಗರದ ರಸ್ತೆಗಳೆಲ್ಲ ಹೊಳೆಯಂತೆ ಭಾಸವಾದವು. ಕಿರಿದಾದ ರಸ್ತೆಗಳಲ್ಲಿ ವಾಹನಗಳು ಸಾಗದೇ ನಿಂತಲ್ಲೇ ನಿಂತವು.</p><p>ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೂ ಸೋರಿಕೆ ಉಂಟಾಗಿ, ಜಿಲ್ಲಾಧಿಕಾರಿ ಅವರ ಕೊಠಡಿಗೂ ರಾಡಿ ಮಿಶ್ರಿತ ನೀರು ನುಗ್ಗಿತು. ಕಚೇರಿಯ ಸಿಬ್ಬಂದಿ ನೀರನ್ನು ಹೊರಹಾಕಲು ಶ್ರಮಪಡಬೇಕಾಯಿತು.</p><p>ಸದಾಶಿವ ನಗರ, ಮಹಾಂತೇಶ ನಗರ, ಸಹ್ಯಾದ್ರಿ ನಗರ, ಆಜಂ ನಗರ, ಶಾಹೂ ಮಹಾರಾಜ ನಗರ, ಶಿವಾಜಿ ನಗರ, ವಡಗಾವಿ, ಶಹಾಪುರ, ಹಿಂಡಲಗಾ, ಕಾಕತಿ ವೇಸ್, ಕಾಲೇಜು ರಸ್ತೆ ಸೇರಿದಂತೆ ಎಲ್ಲ ಪ್ರದೇಶದ ರಸ್ತೆಗಳಲ್ಲಿ ಅಲ್ಲಲ್ಲಿ ಮೊಣಕಾಲು ಮುಳುಗುವಷ್ಟು ನೀರಿ ಕಟ್ಟಿಕೊಂಡಿತು. ಸಂಜೆ 6ರ ಸುಮಾರಿಗೆ ಮಳೆ ನಿಂತ ಮೇಲೆ ರಸ್ತೆ ಮೇಲಿನ ನೀರು ತೆರವಾಯಿತು.</p><p>ಜಿಲ್ಲೆಯ ಖಾನಾಪುರ, ಯರಗಟ್ಟಿ, ಸವದತ್ತಿ, ಚಿಕ್ಕೋಡಿ, ಗೋಕಾಕ ಸುತ್ತಲೂ ಸಾಧಾರಣ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>