<p><strong>ಚನ್ನಮ್ಮನ ಕಿತ್ತೂರು</strong>: ಇಲ್ಲಿಯ ಶಿವಾ ಪೆಟ್ರೋಲ್ ಪಂಪ್ ನಲ್ಲಿ ರಾತ್ರಿ ವೇಳೆ ಮಲಗಿಕೊಂಡಿದ್ದ ಇಬ್ಬರು ಕೆಲಸಗಾರರನ್ನು ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದವರಿಗೆ ಬೆಳಗಾವಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಸುಭಾಸ ಸಂಕದ ಜೀವಾವಧಿ ಶಿಕ್ಷೆ ಹಾಗೂ ₹5.50 ಲಕ್ಷ ದಂಡ ವಿಧಿಸಿ ಈಚೆಗೆ ತೀರ್ಪು ನೀಡಿದ್ದಾರೆ. ಧಾರವಾಡ ತಾಲ್ಲೂಕಿನ ಕಲ್ಲಾಪುರ ಗ್ರಾಮದ ಕರೆಮ್ಮ ಗುಡಿ ಓಣಿಯ ಭೀಮಪ್ಪ ಮಲ್ಲಪ್ಪ ಪೀರತಪ್ಪನವರ (27) ಶಿಕ್ಷೆಗೊಳಗಾದ ಅಪರಾಧಿ.</p>.<p>2019ರ ಮೇ 15ರ ರಾತ್ರಿ ಪಂಪ್ ಹೊರಗಡೆ ಮಲಗಿದ್ದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವ-ಲಿಂಗದಳ್ಳಿ ಗ್ರಾಮದ ಮಂಜುನಾಥ ಈರಪ್ಪ ಪಟ್ಟಣಶೆಟ್ಟಿ (23) ಹಾಗೂ ಪಂಪ್ ಕಚೇರಿಯ ಒಳಗೆ ಮಲಗಿದ್ದ ತಿಗಡೊಳ್ಳಿ ಗ್ರಾಮದ ಮುಸ್ತಾಕ್ ಮಹಮ್ಮದಸಿರಾಜ್ ಬೀಡಿ (35) ಅವರನ್ನು ಭೀಮಪ್ಪ ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ಒಳಗಿದ್ದ ದುಡ್ಡನ್ನೂ ದೋಚಿಕೊಂಡು ಹೋಗಿದ್ದ.</p>.<p>ಪ್ರಕರಣದ ಬೆನ್ನಟ್ಟಿದ್ದ ಕಿತ್ತೂರು ಪೊಲೀಸರು ಭೀಮಪ್ಪನನ್ನು ಬಂಧಿಸಿದ್ದರು. ಅಂದಿನ ಸಿಪಿಐ ರಾಘವೇಂದ್ರ ಹವಾಲ್ದಾರ್, ಎಸ್ಐ ಶ್ರೀಕಾಂತ ತೋಟಗಿ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಆರ್. ಎ. ಗಡಕರಿ ವಾದ ಮಂಡಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-21-1511220061</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ಇಲ್ಲಿಯ ಶಿವಾ ಪೆಟ್ರೋಲ್ ಪಂಪ್ ನಲ್ಲಿ ರಾತ್ರಿ ವೇಳೆ ಮಲಗಿಕೊಂಡಿದ್ದ ಇಬ್ಬರು ಕೆಲಸಗಾರರನ್ನು ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದವರಿಗೆ ಬೆಳಗಾವಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಸುಭಾಸ ಸಂಕದ ಜೀವಾವಧಿ ಶಿಕ್ಷೆ ಹಾಗೂ ₹5.50 ಲಕ್ಷ ದಂಡ ವಿಧಿಸಿ ಈಚೆಗೆ ತೀರ್ಪು ನೀಡಿದ್ದಾರೆ. ಧಾರವಾಡ ತಾಲ್ಲೂಕಿನ ಕಲ್ಲಾಪುರ ಗ್ರಾಮದ ಕರೆಮ್ಮ ಗುಡಿ ಓಣಿಯ ಭೀಮಪ್ಪ ಮಲ್ಲಪ್ಪ ಪೀರತಪ್ಪನವರ (27) ಶಿಕ್ಷೆಗೊಳಗಾದ ಅಪರಾಧಿ.</p>.<p>2019ರ ಮೇ 15ರ ರಾತ್ರಿ ಪಂಪ್ ಹೊರಗಡೆ ಮಲಗಿದ್ದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವ-ಲಿಂಗದಳ್ಳಿ ಗ್ರಾಮದ ಮಂಜುನಾಥ ಈರಪ್ಪ ಪಟ್ಟಣಶೆಟ್ಟಿ (23) ಹಾಗೂ ಪಂಪ್ ಕಚೇರಿಯ ಒಳಗೆ ಮಲಗಿದ್ದ ತಿಗಡೊಳ್ಳಿ ಗ್ರಾಮದ ಮುಸ್ತಾಕ್ ಮಹಮ್ಮದಸಿರಾಜ್ ಬೀಡಿ (35) ಅವರನ್ನು ಭೀಮಪ್ಪ ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ಒಳಗಿದ್ದ ದುಡ್ಡನ್ನೂ ದೋಚಿಕೊಂಡು ಹೋಗಿದ್ದ.</p>.<p>ಪ್ರಕರಣದ ಬೆನ್ನಟ್ಟಿದ್ದ ಕಿತ್ತೂರು ಪೊಲೀಸರು ಭೀಮಪ್ಪನನ್ನು ಬಂಧಿಸಿದ್ದರು. ಅಂದಿನ ಸಿಪಿಐ ರಾಘವೇಂದ್ರ ಹವಾಲ್ದಾರ್, ಎಸ್ಐ ಶ್ರೀಕಾಂತ ತೋಟಗಿ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಆರ್. ಎ. ಗಡಕರಿ ವಾದ ಮಂಡಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-21-1511220061</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>