<p><strong>ಬೆಳಗಾವಿ</strong>: ಪತ್ರಿಕೆ, ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡುವುದಾಗಿ ಬೆದರಿಕೆಯೊಡ್ಡಿ ₹20 ಲಕ್ಷ ಬೇಡಿಕೆ ಇಟ್ಟ ಬಗ್ಗೆ ಮೂವರ ವಿರುದ್ಧ ಆಯುರ್ವೇದ ಔಷಧಿ ಅಂಗಡಿ ಮಾಲೀಕರೊಬ್ಬರು ಖಡೇಬಜಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಶನಿವಾರ ಖೂಟ್ನಲ್ಲಿ ಆಯುರ್ವೇದ ಔಷಧಗಳ ಅಂಗಡಿ ನಡೆಸುತ್ತಿರುವ ಸಾಂಗ್ಲಿ ಮೂಲಕದ ದುರ್ಗರಜ ವೈದ್ಯ (51) ಎಂಬುವವರು, ಏಕನಾಥ ಕೋಲಕಾರ, ವೀರೇಶ ಮಠಪತಿ ಮತ್ತು ಸಿದ್ದು ಸಿದ್ದಪ್ಪನವರ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.</p>.<p>ಮೇ 19ರಂದು ಜಗಳವಾಡಿ, ಪರವಾನಗಿ ಇಲ್ಲದೇ ಜನರಿಗೆ ಕಳಪೆ ಆಯುರ್ವೇದ ವಷಧಿ ಕೊಡುತ್ತಿದ್ದೀಯಾ, ನಮ್ಮೊಂದಿಗೆ ಡೀಲ್ ಮಾಡಿಕೊಂಡರೆ ಈ ವಿಷಯ ಯಾರ ಮುಂದೆಯೂ ಹೇಳುವುದಿಲ್ಲ. ಇಲ್ಲದಿದ್ದಲ್ಲಿ ಸುಳ್ಳು ಪ್ರಚಾರ ಮಾಡುತ್ತೇವೆ ಎಂದು ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-21-1034034841</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಪತ್ರಿಕೆ, ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡುವುದಾಗಿ ಬೆದರಿಕೆಯೊಡ್ಡಿ ₹20 ಲಕ್ಷ ಬೇಡಿಕೆ ಇಟ್ಟ ಬಗ್ಗೆ ಮೂವರ ವಿರುದ್ಧ ಆಯುರ್ವೇದ ಔಷಧಿ ಅಂಗಡಿ ಮಾಲೀಕರೊಬ್ಬರು ಖಡೇಬಜಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಶನಿವಾರ ಖೂಟ್ನಲ್ಲಿ ಆಯುರ್ವೇದ ಔಷಧಗಳ ಅಂಗಡಿ ನಡೆಸುತ್ತಿರುವ ಸಾಂಗ್ಲಿ ಮೂಲಕದ ದುರ್ಗರಜ ವೈದ್ಯ (51) ಎಂಬುವವರು, ಏಕನಾಥ ಕೋಲಕಾರ, ವೀರೇಶ ಮಠಪತಿ ಮತ್ತು ಸಿದ್ದು ಸಿದ್ದಪ್ಪನವರ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.</p>.<p>ಮೇ 19ರಂದು ಜಗಳವಾಡಿ, ಪರವಾನಗಿ ಇಲ್ಲದೇ ಜನರಿಗೆ ಕಳಪೆ ಆಯುರ್ವೇದ ವಷಧಿ ಕೊಡುತ್ತಿದ್ದೀಯಾ, ನಮ್ಮೊಂದಿಗೆ ಡೀಲ್ ಮಾಡಿಕೊಂಡರೆ ಈ ವಿಷಯ ಯಾರ ಮುಂದೆಯೂ ಹೇಳುವುದಿಲ್ಲ. ಇಲ್ಲದಿದ್ದಲ್ಲಿ ಸುಳ್ಳು ಪ್ರಚಾರ ಮಾಡುತ್ತೇವೆ ಎಂದು ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-21-1034034841</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>