<p>ಬೆಳಗಾವಿ: ಕೆನಡಾದಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ನೀಡುವುದಾಗಿ ನಂಬಿಸಿ ಮೂವರಿಂದ ₹5.55 ಲಕ್ಷ ವಂಚಿಸಿದ ಬಗ್ಗೆ ಇಲ್ಲಿನ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದ ನಿವಾಸಿಗಳಾದ ಬಸಪ್ಪ ಹಿಟ್ಟಣಗಿ, ಶಿವರುದ್ರಯ್ಯ ಮಲ್ಲಯ್ಯ ಹಿರೇಮಠ ಹಾಗೂ ಅಡಿವೆಪ್ಪ ಸಿದ್ದಪ್ಪ ಮಾರ್ಯಾ ಗೋಳ ವಂಚನೆಗೆ ಒಳಗಾದವರು.</p>.<p>ರಷ್ಯಾದಲ್ಲಿ ಕೆಲಸ ಮಾಡಿಕೊಂಡು ಊರಿಗೆ ಮರಳಿದ್ದ ಬಸಪ್ಪ ಹಿಟ್ಟಣಗಿ ಅವರು, ತಮ್ಮ ಸ್ನೇಹಿತರಾದ ಶಿವರುದ್ರಯ್ಯ ಮಲಯ್ಯ ಹಿರೇಮಠ ಹಾಗೂ ಅಡಿವೆಪ್ಪ ಸಿದ್ದಪ್ಪ ಮಾರ್ಯಾಗೋಳರೊಂದಿಗೆ ವಿದೇಶ ಉದ್ಯೋಗದ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಫೇಸ್ಬುಕ್ನಲ್ಲಿ ‘ಕೆಮಡಾ ಮೆಸ್ಸಿ’ ಎಂಬ ಖಾತೆ ಮೂಲಕ ಪರಿಚಿತರಾದ ಆರೋಪಿತರು; ‘ಈಡಾನ್’ ಕಂಪನಿಯ ಹೆಸರಿನಲ್ಲಿ ಕೆನಡಾದಲ್ಲಿ ಹಣ್ಣು ಲೋಡಿಂಗ್ ಕೆಲಸ ನೀಡುವುದಾಗಿ ಹೇಳಿ ತಿಂಗಳಿಗೆ ₹4,433 ಕೆನಡಿಯನ್ ಡಾಲರ್ (₹2.79 ಲಕ್ಷ) ಸಂಬಳದ ಆಮಿಷವೊಡ್ಡಿದ್ದರು.</p>.<p>ವೀಸಾ, ಎನ್ಆರ್ಐ ಖಾತೆ, ವಿಮಾನ ಟಿಕೆಟ್ ಸೇರಿದಂತೆ ವಿವಿಧ ಶುಲ್ಕಗಳ ಹೆಸರಿ ನಲ್ಲಿ ಹಣ ಪಡೆದುಕೊಂಡರು. ವಾಟ್ಸ್ಆ್ಯಪ್ ಮೂಲಕ ವೀಸಾ ಕಳುಹಿಸಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲು ಸೂಚಿಸಿದ್ದರು. ಅಲ್ಲಿಗೆ ತೆರಳಿದಾಗ ಮತ್ತೆ ₹50 ಸಾವಿರ ನೀಡಬೇಕು. ಇಲ್ಲವಾದರೆ ಕರೆದುಕೊಂಡು ಹೋಗುವುದಿಲ್ಲವೆಂದು ಹೇಳಿ ತಪ್ಪಿಸಿಕೊಂಡರು’ ಎಂದು ಆರೋಪಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-23-12031116</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ಕೆನಡಾದಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ನೀಡುವುದಾಗಿ ನಂಬಿಸಿ ಮೂವರಿಂದ ₹5.55 ಲಕ್ಷ ವಂಚಿಸಿದ ಬಗ್ಗೆ ಇಲ್ಲಿನ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದ ನಿವಾಸಿಗಳಾದ ಬಸಪ್ಪ ಹಿಟ್ಟಣಗಿ, ಶಿವರುದ್ರಯ್ಯ ಮಲ್ಲಯ್ಯ ಹಿರೇಮಠ ಹಾಗೂ ಅಡಿವೆಪ್ಪ ಸಿದ್ದಪ್ಪ ಮಾರ್ಯಾ ಗೋಳ ವಂಚನೆಗೆ ಒಳಗಾದವರು.</p>.<p>ರಷ್ಯಾದಲ್ಲಿ ಕೆಲಸ ಮಾಡಿಕೊಂಡು ಊರಿಗೆ ಮರಳಿದ್ದ ಬಸಪ್ಪ ಹಿಟ್ಟಣಗಿ ಅವರು, ತಮ್ಮ ಸ್ನೇಹಿತರಾದ ಶಿವರುದ್ರಯ್ಯ ಮಲಯ್ಯ ಹಿರೇಮಠ ಹಾಗೂ ಅಡಿವೆಪ್ಪ ಸಿದ್ದಪ್ಪ ಮಾರ್ಯಾಗೋಳರೊಂದಿಗೆ ವಿದೇಶ ಉದ್ಯೋಗದ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಫೇಸ್ಬುಕ್ನಲ್ಲಿ ‘ಕೆಮಡಾ ಮೆಸ್ಸಿ’ ಎಂಬ ಖಾತೆ ಮೂಲಕ ಪರಿಚಿತರಾದ ಆರೋಪಿತರು; ‘ಈಡಾನ್’ ಕಂಪನಿಯ ಹೆಸರಿನಲ್ಲಿ ಕೆನಡಾದಲ್ಲಿ ಹಣ್ಣು ಲೋಡಿಂಗ್ ಕೆಲಸ ನೀಡುವುದಾಗಿ ಹೇಳಿ ತಿಂಗಳಿಗೆ ₹4,433 ಕೆನಡಿಯನ್ ಡಾಲರ್ (₹2.79 ಲಕ್ಷ) ಸಂಬಳದ ಆಮಿಷವೊಡ್ಡಿದ್ದರು.</p>.<p>ವೀಸಾ, ಎನ್ಆರ್ಐ ಖಾತೆ, ವಿಮಾನ ಟಿಕೆಟ್ ಸೇರಿದಂತೆ ವಿವಿಧ ಶುಲ್ಕಗಳ ಹೆಸರಿ ನಲ್ಲಿ ಹಣ ಪಡೆದುಕೊಂಡರು. ವಾಟ್ಸ್ಆ್ಯಪ್ ಮೂಲಕ ವೀಸಾ ಕಳುಹಿಸಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲು ಸೂಚಿಸಿದ್ದರು. ಅಲ್ಲಿಗೆ ತೆರಳಿದಾಗ ಮತ್ತೆ ₹50 ಸಾವಿರ ನೀಡಬೇಕು. ಇಲ್ಲವಾದರೆ ಕರೆದುಕೊಂಡು ಹೋಗುವುದಿಲ್ಲವೆಂದು ಹೇಳಿ ತಪ್ಪಿಸಿಕೊಂಡರು’ ಎಂದು ಆರೋಪಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-23-12031116</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>