‘ಆರೋಗ್ಯ ಇಲಾಖೆ, ಬಿಮ್ಸ್, ನಗರಪಾಲಿಕೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ದಂತ ವೈದ್ಯರ ಸಂಘ, ಕೆಎಲ್ಇ ಆಸ್ಪತ್ರೆ, ಲೇಕ್ವ್ಯೂ ಆಸ್ಪತ್ರೆ, ವಿಜಯ ಆರ್ಥೊಕೇರ್ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ ಬೆಳಗಾವಿ ಘಟಕ, ಸಂಯುಕ್ತ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ, ಭಾರತ ನಿರ್ಮಾಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದೆ. 75ಕ್ಕೂ ಹೆಚ್ಚಿನ ವೈದ್ಯರು ಭಾಗವಹಿಸಿ, ತಪಾಸಿಸುವರು ಹಾಗೂ ಚಿಕಿತ್ಸೆ ನೀಡುವರು. ಔಷಧಿಗಳನ್ನೂ ಕೂಡ ಉಚಿತವಾಗಿ ನೀಡಲಾಗುವುದು. ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆಯನ್ನು ಕೂಡ ಉಚಿತವಾಗಿ ಕೊಡಿಸಲಾಗುವುದು. ನೇತ್ರ ತಪಾಸಣೆಯೂ ನಡೆಯಲಿದೆ. ಕೊಳೆಗೇರಿಗಳ ನಿವಾಸಿಗಳು ಹಾಗೂ ಆರ್ಥಿಕವಾಗಿ ಸಬಲರಲ್ಲದವರು ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಹೇಳಿದರು.