ಬೆಳಗಾವಿ: ‘ಸಂವಿಧಾನವೇ ಪರಮ ಸತ್ಯ. ಹೀಗಾಗಿ, ಇಂದಿನ ಯುವಜನರಿಗೆ ಭಾರತೀಯ ಸಂವಿಧಾನದ ಆಶಯಗಳನ್ನು ಮನಗಾಣಿಸಬೇಕಾದ ಅಗತ್ಯವಿದೆ’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಜನವರಿ 25 ಹಾಗೂ 26ರಂದು ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿದೆ. ಜನಪರ ಚಳವಳಿಗಳ ಜೊತೆ ಸಂವಿಧಾನ ಹಾಗೂ ಮೀಸಲಾತಿ ಕುರಿತು ಸಂವಾದ, ಚರ್ಚೆ ನಡೆಸುವ ಆಶಯ ಹೊಂದಲಾಗಿದೆ’ ಎಂದು ತಿಳಿಸಿದರು.