<p><strong>ಬೆಳಗಾವಿ:</strong> ‘ಬೆಳಗಾವಿಯಯಲ್ಲಿ ಉದ್ಯಮಗಳು ಬೆಳೆಯಬೇಕೆಂದರೆ ಇಲ್ಲಿನ ಸಮಸ್ಯೆಗಳು ನಿವಾರಣೆಯಾಗಬೇಕು. ಅದಕ್ಕೆ ಉದ್ಯಮಿಗಳು ಒಂದಾಗಿ ಗಟ್ಟಿ ಧ್ವನಿ ಎತ್ತಬೇಕು’ ಎನ್ನುವ ಒಕ್ಕೊರಲ ನಿರ್ಣಯವನ್ನು, ಇಲ್ಲಿ ಮಂಗಳವಾರ ಆರಂಭವಾದ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನದಲ್ಲಿ ಕೈಗೊಳ್ಳಲಾಯಿತು.</p><p>ಬೆಳಗಾವಿ ವಾಣಿಜ್ಯೋದ್ಯಮ ಸಂಘದ ವತಿಯಿಂದ ಫೌಂಡ್ರಿಕ್ಲಸ್ಟರ್ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನ ‘ಬೆಲೆಕ್ಸ್–2026’ಗೆ ಮಂಗಳವಾರ ಚಾಲನೆ ದೊರೆಯಿತು. ಉದ್ಯಮ ಬೆಳವಣಿಗೆ ಹಾಗೂ ಉದ್ಯಮಿಗಳ ಬೆಳವಣಿಗೆಗೆ ಬೇಕಾದ ನಿರ್ಣಯಗಳನ್ನು ಮಂಡಿಸಲಾಯಿತು.</p><p>‘ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ಆದರೆ, ಸರ್ಕಾರದ ಅಸಹಕಾರದಿಂದ ಕೈಗಾರಿಕೆಗಳು ಬೆಳೆಯುತ್ತಿಲ್ಲ. ‘ಬಿಯಾಂಡ್ ಬೆಂಗಳೂರು’ ಕಲ್ಪನೆ ಹುಬ್ಬಳ್ಳಿಗೇ ನಿಲ್ಲುತ್ತಿದೆ. ಉದ್ಯಮಿಗಳು ಶಕ್ತಿ ತೋರಿಸುವವರೆಗೆ, ನೀವು ಒಟ್ಟಾಗುವವರೆಗೆ ಯಾವುದೇ ಸರ್ಕಾರವೂ ಕಣ್ಣೆತ್ತಿ ನೋಡುವುದಿಲ್ಲ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.</p><p>‘ಉದ್ಯಮಬಾಗದಿಂದಾಗಿ ಬೆಳಗಾವಿಗೆ ಶಕ್ತಿ ಬಂದಿದೆ. ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಪ್ರಯತ್ನ ಆರಂಭವಾಗಿದೆ. ಎಲ್ಲದಕ್ಕೂ ಎಲ್ಲರ ಸಹಕಾರ ಅಗತ್ಯ. ನೀವೆಲ್ಲ ಒಂದಾದರೆ ಉದ್ಯಮಗಳನ್ನು, ಉದ್ಯಮಿಗಳನ್ನು ಬೆಳೆಸಬಹುದು’ ಎಂದು ಹೇಳಿದರು.</p><p>ಉದ್ಯಮಿ ಜಯಂತ ಹುಂಬರವಾಡಿ ಮಾತನಾಡಿ, ‘ಬಹುರಾಷ್ಟ್ರೀಯ ಕಂಪನಿಗಳಿಗೆ ಆದ್ಯತೆ ಸಿಗುತ್ತಿದೆ. ಭಾರತೀಯ ಸಂಸ್ಥೆಗಳಿಗೆ ಗೌರವ ಇಲ್ಲ. ಸಮಸ್ಯೆಗಳ ನಡುವೆ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ಧೈರ್ಯದಿಂದ ಮಾತನಾಡುವವರೆಗೆ ಯಾರೂ ನೋಡುವುದಿಲ್ಲ’ ಎಂದರು.</p><p>ಮಹಾರಾಷ್ಟ್ರ ಜೈನ್ ಅಲ್ಪಸಂಖ್ಯಾತರ ಹಣಕಾಸು ಅಭಿವೃದ್ಧಿ ನಿಗಮದ ಚೇರಮನ್ ಲಲಿತ್ ಗಾಂಧಿ ಮಾತನಾಡಿ, ‘ಮಹಾರಾಷ್ಟ್ರದಲ್ಲಿ 26 ಹೊಸ ಇಂಡಸ್ಟ್ರಿಯಲ್ ಎಸ್ಟೇಟ್ ಆರಂಭಿಸಲಾಗುತ್ತಿದೆ. ಅಲ್ಲಿನ ಕೈಗಾರಿಕಾ ನೀತಿ ತಕ್ಕ ಮಟ್ಟಿಗೆ ಉತ್ತಮವಾಗಿದೆ. ಆದರೆ ಚೀನಾಕ್ಕೆ ಹೋಲಿಸಿದರೆ ನಮಗೆ ಯಾವ ಸೌಲಭ್ಯವೂ ಇಲ್ಲ. ಚೀನಾದಲ್ಲಿ 15 ದಿನಗಳಲ್ಲಿ ಎಲ್ಲವೂ ಸಿಗುತ್ತದೆ. ನಮ್ಮಲ್ಲಿ ಒಂದು ಅನುಮತಿ ಪಡೆಯಲು 2ರಿಂದ 3 ವರ್ಷ ಬೇಕಾಗುತ್ತಿದೆ’ ಎಂದರು.</p><p>ಗೋವಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷೆ ಪ್ರತಿಮಾ ದೋಂಡ್, ಸಂಜೀವ್ ದೇಶಪಾಂಡೆ ಮಾತನಾಡಿದರು. ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸ್ವಾಗತಿಸಿದರು. ಇವೆಂಟ್ ಚೇರಮನ್ ಉದಯ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಇವೆಂಟ್ ಕೋ ಚೇರಮನ್ ವಿಕ್ರಮ ಜೈನ್, ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಾದ ರೋಹಿತ್ ಕಪಾಡಿಯಾ, ಸಂದೀಪ ಬಾಗೇವಾಡಿ, ಅನಿತಾ ಕಣಬರ್ಗಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸತೀಶ ಕುಲಕರ್ಣಿ ವಂದಿಸಿದರು.</p><p>ಸ್ಥಳೀಯ ಕೈಗಾರಿಕೆಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಉದ್ಯಮಿಗಳು, ಪಾಲುದಾರರು ಭಾಗವಹಿಸಿದ್ದರು. 85ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಬೆಳಗಾವಿಯಯಲ್ಲಿ ಉದ್ಯಮಗಳು ಬೆಳೆಯಬೇಕೆಂದರೆ ಇಲ್ಲಿನ ಸಮಸ್ಯೆಗಳು ನಿವಾರಣೆಯಾಗಬೇಕು. ಅದಕ್ಕೆ ಉದ್ಯಮಿಗಳು ಒಂದಾಗಿ ಗಟ್ಟಿ ಧ್ವನಿ ಎತ್ತಬೇಕು’ ಎನ್ನುವ ಒಕ್ಕೊರಲ ನಿರ್ಣಯವನ್ನು, ಇಲ್ಲಿ ಮಂಗಳವಾರ ಆರಂಭವಾದ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನದಲ್ಲಿ ಕೈಗೊಳ್ಳಲಾಯಿತು.</p><p>ಬೆಳಗಾವಿ ವಾಣಿಜ್ಯೋದ್ಯಮ ಸಂಘದ ವತಿಯಿಂದ ಫೌಂಡ್ರಿಕ್ಲಸ್ಟರ್ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ಕೈಗಾರಿಕೆ ಮತ್ತು ವಾಣಿಜ್ಯ ಪ್ರದರ್ಶನ ‘ಬೆಲೆಕ್ಸ್–2026’ಗೆ ಮಂಗಳವಾರ ಚಾಲನೆ ದೊರೆಯಿತು. ಉದ್ಯಮ ಬೆಳವಣಿಗೆ ಹಾಗೂ ಉದ್ಯಮಿಗಳ ಬೆಳವಣಿಗೆಗೆ ಬೇಕಾದ ನಿರ್ಣಯಗಳನ್ನು ಮಂಡಿಸಲಾಯಿತು.</p><p>‘ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ಆದರೆ, ಸರ್ಕಾರದ ಅಸಹಕಾರದಿಂದ ಕೈಗಾರಿಕೆಗಳು ಬೆಳೆಯುತ್ತಿಲ್ಲ. ‘ಬಿಯಾಂಡ್ ಬೆಂಗಳೂರು’ ಕಲ್ಪನೆ ಹುಬ್ಬಳ್ಳಿಗೇ ನಿಲ್ಲುತ್ತಿದೆ. ಉದ್ಯಮಿಗಳು ಶಕ್ತಿ ತೋರಿಸುವವರೆಗೆ, ನೀವು ಒಟ್ಟಾಗುವವರೆಗೆ ಯಾವುದೇ ಸರ್ಕಾರವೂ ಕಣ್ಣೆತ್ತಿ ನೋಡುವುದಿಲ್ಲ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.</p><p>‘ಉದ್ಯಮಬಾಗದಿಂದಾಗಿ ಬೆಳಗಾವಿಗೆ ಶಕ್ತಿ ಬಂದಿದೆ. ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಪ್ರಯತ್ನ ಆರಂಭವಾಗಿದೆ. ಎಲ್ಲದಕ್ಕೂ ಎಲ್ಲರ ಸಹಕಾರ ಅಗತ್ಯ. ನೀವೆಲ್ಲ ಒಂದಾದರೆ ಉದ್ಯಮಗಳನ್ನು, ಉದ್ಯಮಿಗಳನ್ನು ಬೆಳೆಸಬಹುದು’ ಎಂದು ಹೇಳಿದರು.</p><p>ಉದ್ಯಮಿ ಜಯಂತ ಹುಂಬರವಾಡಿ ಮಾತನಾಡಿ, ‘ಬಹುರಾಷ್ಟ್ರೀಯ ಕಂಪನಿಗಳಿಗೆ ಆದ್ಯತೆ ಸಿಗುತ್ತಿದೆ. ಭಾರತೀಯ ಸಂಸ್ಥೆಗಳಿಗೆ ಗೌರವ ಇಲ್ಲ. ಸಮಸ್ಯೆಗಳ ನಡುವೆ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ಧೈರ್ಯದಿಂದ ಮಾತನಾಡುವವರೆಗೆ ಯಾರೂ ನೋಡುವುದಿಲ್ಲ’ ಎಂದರು.</p><p>ಮಹಾರಾಷ್ಟ್ರ ಜೈನ್ ಅಲ್ಪಸಂಖ್ಯಾತರ ಹಣಕಾಸು ಅಭಿವೃದ್ಧಿ ನಿಗಮದ ಚೇರಮನ್ ಲಲಿತ್ ಗಾಂಧಿ ಮಾತನಾಡಿ, ‘ಮಹಾರಾಷ್ಟ್ರದಲ್ಲಿ 26 ಹೊಸ ಇಂಡಸ್ಟ್ರಿಯಲ್ ಎಸ್ಟೇಟ್ ಆರಂಭಿಸಲಾಗುತ್ತಿದೆ. ಅಲ್ಲಿನ ಕೈಗಾರಿಕಾ ನೀತಿ ತಕ್ಕ ಮಟ್ಟಿಗೆ ಉತ್ತಮವಾಗಿದೆ. ಆದರೆ ಚೀನಾಕ್ಕೆ ಹೋಲಿಸಿದರೆ ನಮಗೆ ಯಾವ ಸೌಲಭ್ಯವೂ ಇಲ್ಲ. ಚೀನಾದಲ್ಲಿ 15 ದಿನಗಳಲ್ಲಿ ಎಲ್ಲವೂ ಸಿಗುತ್ತದೆ. ನಮ್ಮಲ್ಲಿ ಒಂದು ಅನುಮತಿ ಪಡೆಯಲು 2ರಿಂದ 3 ವರ್ಷ ಬೇಕಾಗುತ್ತಿದೆ’ ಎಂದರು.</p><p>ಗೋವಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷೆ ಪ್ರತಿಮಾ ದೋಂಡ್, ಸಂಜೀವ್ ದೇಶಪಾಂಡೆ ಮಾತನಾಡಿದರು. ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸ್ವಾಗತಿಸಿದರು. ಇವೆಂಟ್ ಚೇರಮನ್ ಉದಯ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಇವೆಂಟ್ ಕೋ ಚೇರಮನ್ ವಿಕ್ರಮ ಜೈನ್, ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಾದ ರೋಹಿತ್ ಕಪಾಡಿಯಾ, ಸಂದೀಪ ಬಾಗೇವಾಡಿ, ಅನಿತಾ ಕಣಬರ್ಗಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸತೀಶ ಕುಲಕರ್ಣಿ ವಂದಿಸಿದರು.</p><p>ಸ್ಥಳೀಯ ಕೈಗಾರಿಕೆಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಉದ್ಯಮಿಗಳು, ಪಾಲುದಾರರು ಭಾಗವಹಿಸಿದ್ದರು. 85ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>