ಒಂದಿಪ್ಪತ್ತು ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಜೋಳ ಹಾಗೂ ಅಕ್ಕಿ ಕಾರಲ್ಲಿತ್ತು. ಬಿಡಾಡಿ ದನಗಳ ಕಷ್ಟ ನೋಡಲಾಗದೆ ಅವುಗಳಿಗೆ ಹಾಕಿದೆವು. ನನ್ನೊಂದಿಗೆ ಪ್ರಾಣಿ ದಯಾ ಸಂಘದ ರೋಹನ್ ರಜಪೂತ, ಹರೀಶ ನೆರವಾದರು. ಮಾರ್ಚ್ 20ರಿಂದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಆರಂಭಿಸಿರುವ ಹಸಿದವರತ್ತ ನಮ್ಮ ಚಿತ್ತ ಅಭಿಯಾನ ಸಾರ್ಥಕ ಎನಿಸಿತು. ಮೇವಿಲ್ಲದೆ ಕಂಗಾಲಾಗಿದ್ದ ದನ ಕರುಗಳಿಗೆ ನೆರವಾದ ತೃಪ್ತಿ ನಮ್ಮದು ಎಂದು ಚಂದರಗಿ ತಿಳಿಸಿದರು.