<p><strong>ಬೆಳಗಾವಿ</strong>: ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ, ತಾನು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದೇನೆ ಎಂದು ಸುಳ್ಳು ಹೇಳಿ ಯುವತಿಯಿಂದ ₹3.39 ಲಕ್ಷ ಕಬಳಿಸಿದ ಬಗ್ಗೆ ದೂರು ದಾಖಲಾಗಿದೆ.</p>.<p>ನಗರದ ಅಶ್ವಿನಿ ಖಳಮಟ್ಟಿ ಮೋಸಕ್ಕೊಳಗಾದವರು. ಮಾರ್ಚ್ 19ರಂದು ಮ್ಯಾಟ್ರಿಮೋನಿಯಲ್ ಆ್ಯಪ್ನಲ್ಲಿ ಅಶ್ವನಿ ನೋಂದಾಯಿಸಿಕೊಂಡಿದ್ದರು. ಆರ್ಯನಕುಮಾರ ಎಂದು ಹೇಳಿಕೊಂಡ ವ್ಯಕ್ತಿ ತಾನು ನೆದರಲ್ಯಾಂಡ್ನಲ್ಲಿ ದಂತ ವೈದ್ಯನಾಗಿದ್ದೆನೆಂದು ಪರಿಚಯಿಸಿಕೊಂಡು, ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತಾಡಿದ್ದರು.</p>.<p>ಮೇ 25ರಂದು ತಾನು ನೆದರ್ಲ್ಯಾಂಡ್ನಿಂದ ಬೆಳಗಾವಿಗೆ ಬರುತ್ತಿರುವುದಾಗಿ ಮುಂಚಿತವಾಗಿಯೇ ಆರ್ಯನ್ ಕುಮಾರ ಹೇಳಿಕೊಂಡಿದ್ದ. ಆದರೆ, ಮೇ 26ರಂದು ಕರೆ ಮಾಡಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿ, ಅಪರಿಚಿತ ಮಹಿಳೆಯೊಬ್ಬಳಿಗೆ ಫೋನ್ ಕೊಟ್ಟು ಮಾತನಾಡಲು ಹೇಳಿದ್ದ.</p>.<p>ಆ ಮಹಿಳೆ ಆರ್ಯನ್ ಕುಮಾರ ಪರಿಚಯ ಇರುವುದನ್ನು ಖಚಿತಪಡಿಸಿಕೊಂಡು, ಇವರ ಬಳಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಕರೆನ್ಸಿ ಇದೆ. ಅದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಲು ₹85.8 ಸಾವಿರ ಶುಲ್ಕ ಬೇಕಾಗುತ್ತದೆ ಎಂದು ಹೇಳಿದ್ದಳು.</p>.<p>ಇದನ್ನು ನಂಬಿದ ಅಶ್ವನಿ, ಅವರು ನೀಡಿದ ಬ್ಯಾಂಕ್ ಖಾತೆಗೆ ತಾನು ಕೆಲಸ ಮಾಡುವ ಕಂಪನಿ ಸಿಇಒ ಖಾತೆಯಿಂದ ಹಣ ಜಮಾ ಮಾಡಿದ್ದರು.</p>.<p>ನಂತರ ಪುನಃ ಕರೆ ಮಾಡಿದ ಆ ಮಹಿಳೆ ಈತನ ಬಳಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ವಜ್ರಗಳಿವೆ. ಜಿಎಸ್ಟಿಗಾಗಿ ₹2.53 ಲಕ್ಷ ಬೇಕಾಗುತ್ತದೆ ಎಂದು ಹೇಳಿದಾಗಲೂ ಅಶ್ವಿನಿ ಹಣ ಜಮೆ ಮಾಡಿದರು. ವ್ಯಕ್ತಿಯ ಸಂಪರ್ಕ ಕಡಿತಗೊಂಡ ಬಳಿಕ ಮೋಸ ಹೋಗಿದ್ದು ಗೊತ್ತಾಗಿದೆ.</p>.<p>ಇಲ್ಲಿನ ಆರ್ಪಿಡಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಭಾನುವಾರ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡು ಹೋಗುತ್ತಿದ್ದ ಒಬ್ಬನನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಹಾದ್ವಾರ ರಸ್ತೆಯ ವೈಭವ ಪೋಠೆ ಬಂಧಿತ. ಆತನಿಂದ ಕಬ್ಬಿಣದ ಚಾಕು ವಶಕ್ಕೆ ಪಡೆಯಲಾಗಿದೆ.</p>.<p>ಬೆಳಗಾವಿ ನಗರದ ವಿವಿಧೆಡೆ ಭಾನುವಾರ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಎಪಿಎಂಸಿ ಮತ್ತು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಜ್ಯೋತಿ ನಗರ ಬಳಿ ತಾಲ್ಲೂಕಿನ ಕಂಗ್ರಾಳಿಯ ಧೀರಜ್ ಗೋಡ, ಎಪಿಎಂಸಿ ಗೇಟ್ ಬಳಿ ಅಂಬೇಡ್ಕರ್ ನಗರದ ಸಚಿನ ಪಟ್ಟಣ, ಕೇಂದ್ರೀಯ ಬಸ್ ನಿಲ್ದಾಣದ ಬಳಿ ಸಮರ್ಥ ನಗರದ ಶ್ರೇಯಸ್ ಪಾಟೀಲ ಎಂಬುವವರನ್ನು ಬಂಧಿಸಿದ್ದಾರೆ.</p>.<p>ಬೆಳಗಾವಿ ನಗರದ ವಿವಿಧೆಡೆ ಭಾನುವಾರ ಆನ್ಲೈನ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಮೂವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಭರತೇಶ ಕಾಲೇಜು ಬಳಿ ಶಾಹೂ ನಗರದ ರಶೀದ್ಖಾನ್ ಪಠಾಣ ಎಂಬಾತನನ್ನು ಬಂಧಿಸಿ, ಮೊಬೈಲ್ ಮತ್ತು ₹1,680 ನಗದು ವಶಕ್ಕೆ ಪಡೆದಿದ್ದಾರೆ. ಕಾಮತ ಗಲ್ಲಿ ಕ್ರಾಸ್ ಬಳಿ ಶಹಾಪುರದ ಖಡೇಬಜಾರ್ನ ಸಾಗರ ಹೊನಗೇಕರ ಎಂಬಾತನನ್ನು ಬಂಧಿಸಿ, ಮೊಬೈಲ್, ₹3,060 ನಗದು ವಶಕ್ಕೆ ಪಡೆದಿದ್ದಾರೆ.</p>.<p>ಕೇಂದ್ರೀಯ ಬಸ್ ನಿಲ್ದಾಣದ ಬಳಿ ವೀರಭದ್ರ ನಗರದ ರೋಷನ್ಜಮೀರ್ ಕುಡಚಿ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಮೊಬೈಲ್, ₹1,810 ನಗದು ವಶಕ್ಕೆ ಪಡೆಯಲಾಗಿದೆ.</p>.<p>ಬೈಲಹೊಂಗಲ : ಆರ್.ಸಿ.ಬಿ. ಗೆಲುವಿನ ಸಂಭ್ರಮಾಚರಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಯುವಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.</p>.<p>ನಗರದ ಇಂಚಲ ಕ್ರಾಸ್ ಸಮೀಪ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಬಸವನಗರ 4ನೇ ಅಡ್ಡರಸ್ತೆ ನಿವಾಸಿ ವಿನಾಯಕ ಅನಿಲ ರಾಯರ (23) ಎಂದು ಗುರುತಿಸಲಾಗಿದೆ.ಘಟನೆ ನಡೆದ ಕೂಡಲೇ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಿಪಿಐ ಪ್ರಮೋದ ಯಲಿಗಾರ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-21-1256587190</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ, ತಾನು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದೇನೆ ಎಂದು ಸುಳ್ಳು ಹೇಳಿ ಯುವತಿಯಿಂದ ₹3.39 ಲಕ್ಷ ಕಬಳಿಸಿದ ಬಗ್ಗೆ ದೂರು ದಾಖಲಾಗಿದೆ.</p>.<p>ನಗರದ ಅಶ್ವಿನಿ ಖಳಮಟ್ಟಿ ಮೋಸಕ್ಕೊಳಗಾದವರು. ಮಾರ್ಚ್ 19ರಂದು ಮ್ಯಾಟ್ರಿಮೋನಿಯಲ್ ಆ್ಯಪ್ನಲ್ಲಿ ಅಶ್ವನಿ ನೋಂದಾಯಿಸಿಕೊಂಡಿದ್ದರು. ಆರ್ಯನಕುಮಾರ ಎಂದು ಹೇಳಿಕೊಂಡ ವ್ಯಕ್ತಿ ತಾನು ನೆದರಲ್ಯಾಂಡ್ನಲ್ಲಿ ದಂತ ವೈದ್ಯನಾಗಿದ್ದೆನೆಂದು ಪರಿಚಯಿಸಿಕೊಂಡು, ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತಾಡಿದ್ದರು.</p>.<p>ಮೇ 25ರಂದು ತಾನು ನೆದರ್ಲ್ಯಾಂಡ್ನಿಂದ ಬೆಳಗಾವಿಗೆ ಬರುತ್ತಿರುವುದಾಗಿ ಮುಂಚಿತವಾಗಿಯೇ ಆರ್ಯನ್ ಕುಮಾರ ಹೇಳಿಕೊಂಡಿದ್ದ. ಆದರೆ, ಮೇ 26ರಂದು ಕರೆ ಮಾಡಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿ, ಅಪರಿಚಿತ ಮಹಿಳೆಯೊಬ್ಬಳಿಗೆ ಫೋನ್ ಕೊಟ್ಟು ಮಾತನಾಡಲು ಹೇಳಿದ್ದ.</p>.<p>ಆ ಮಹಿಳೆ ಆರ್ಯನ್ ಕುಮಾರ ಪರಿಚಯ ಇರುವುದನ್ನು ಖಚಿತಪಡಿಸಿಕೊಂಡು, ಇವರ ಬಳಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಕರೆನ್ಸಿ ಇದೆ. ಅದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಲು ₹85.8 ಸಾವಿರ ಶುಲ್ಕ ಬೇಕಾಗುತ್ತದೆ ಎಂದು ಹೇಳಿದ್ದಳು.</p>.<p>ಇದನ್ನು ನಂಬಿದ ಅಶ್ವನಿ, ಅವರು ನೀಡಿದ ಬ್ಯಾಂಕ್ ಖಾತೆಗೆ ತಾನು ಕೆಲಸ ಮಾಡುವ ಕಂಪನಿ ಸಿಇಒ ಖಾತೆಯಿಂದ ಹಣ ಜಮಾ ಮಾಡಿದ್ದರು.</p>.<p>ನಂತರ ಪುನಃ ಕರೆ ಮಾಡಿದ ಆ ಮಹಿಳೆ ಈತನ ಬಳಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ವಜ್ರಗಳಿವೆ. ಜಿಎಸ್ಟಿಗಾಗಿ ₹2.53 ಲಕ್ಷ ಬೇಕಾಗುತ್ತದೆ ಎಂದು ಹೇಳಿದಾಗಲೂ ಅಶ್ವಿನಿ ಹಣ ಜಮೆ ಮಾಡಿದರು. ವ್ಯಕ್ತಿಯ ಸಂಪರ್ಕ ಕಡಿತಗೊಂಡ ಬಳಿಕ ಮೋಸ ಹೋಗಿದ್ದು ಗೊತ್ತಾಗಿದೆ.</p>.<p>ಇಲ್ಲಿನ ಆರ್ಪಿಡಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಭಾನುವಾರ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡು ಹೋಗುತ್ತಿದ್ದ ಒಬ್ಬನನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಹಾದ್ವಾರ ರಸ್ತೆಯ ವೈಭವ ಪೋಠೆ ಬಂಧಿತ. ಆತನಿಂದ ಕಬ್ಬಿಣದ ಚಾಕು ವಶಕ್ಕೆ ಪಡೆಯಲಾಗಿದೆ.</p>.<p>ಬೆಳಗಾವಿ ನಗರದ ವಿವಿಧೆಡೆ ಭಾನುವಾರ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಎಪಿಎಂಸಿ ಮತ್ತು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಜ್ಯೋತಿ ನಗರ ಬಳಿ ತಾಲ್ಲೂಕಿನ ಕಂಗ್ರಾಳಿಯ ಧೀರಜ್ ಗೋಡ, ಎಪಿಎಂಸಿ ಗೇಟ್ ಬಳಿ ಅಂಬೇಡ್ಕರ್ ನಗರದ ಸಚಿನ ಪಟ್ಟಣ, ಕೇಂದ್ರೀಯ ಬಸ್ ನಿಲ್ದಾಣದ ಬಳಿ ಸಮರ್ಥ ನಗರದ ಶ್ರೇಯಸ್ ಪಾಟೀಲ ಎಂಬುವವರನ್ನು ಬಂಧಿಸಿದ್ದಾರೆ.</p>.<p>ಬೆಳಗಾವಿ ನಗರದ ವಿವಿಧೆಡೆ ಭಾನುವಾರ ಆನ್ಲೈನ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಮೂವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಭರತೇಶ ಕಾಲೇಜು ಬಳಿ ಶಾಹೂ ನಗರದ ರಶೀದ್ಖಾನ್ ಪಠಾಣ ಎಂಬಾತನನ್ನು ಬಂಧಿಸಿ, ಮೊಬೈಲ್ ಮತ್ತು ₹1,680 ನಗದು ವಶಕ್ಕೆ ಪಡೆದಿದ್ದಾರೆ. ಕಾಮತ ಗಲ್ಲಿ ಕ್ರಾಸ್ ಬಳಿ ಶಹಾಪುರದ ಖಡೇಬಜಾರ್ನ ಸಾಗರ ಹೊನಗೇಕರ ಎಂಬಾತನನ್ನು ಬಂಧಿಸಿ, ಮೊಬೈಲ್, ₹3,060 ನಗದು ವಶಕ್ಕೆ ಪಡೆದಿದ್ದಾರೆ.</p>.<p>ಕೇಂದ್ರೀಯ ಬಸ್ ನಿಲ್ದಾಣದ ಬಳಿ ವೀರಭದ್ರ ನಗರದ ರೋಷನ್ಜಮೀರ್ ಕುಡಚಿ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಮೊಬೈಲ್, ₹1,810 ನಗದು ವಶಕ್ಕೆ ಪಡೆಯಲಾಗಿದೆ.</p>.<p>ಬೈಲಹೊಂಗಲ : ಆರ್.ಸಿ.ಬಿ. ಗೆಲುವಿನ ಸಂಭ್ರಮಾಚರಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಯುವಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.</p>.<p>ನಗರದ ಇಂಚಲ ಕ್ರಾಸ್ ಸಮೀಪ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಬಸವನಗರ 4ನೇ ಅಡ್ಡರಸ್ತೆ ನಿವಾಸಿ ವಿನಾಯಕ ಅನಿಲ ರಾಯರ (23) ಎಂದು ಗುರುತಿಸಲಾಗಿದೆ.ಘಟನೆ ನಡೆದ ಕೂಡಲೇ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಿಪಿಐ ಪ್ರಮೋದ ಯಲಿಗಾರ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-21-1256587190</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>