ಮಳೆಯಿಂದಾಗಿ ರಾಮದುರ್ಗ- ಬೆಳಗಾವಿ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಾಮದುರ್ಗದಿಂದ ಕೊಣ್ಣೂರ, ಕಟಕೋಳ, ಕಟಕೋಳ-ಮುನವಳ್ಳಿ, ಸುರೇಬಾನ- ಕುಳಗೇರಿ ಕ್ರಾಸ್ ಮೊದಲಾದ ಮಾರ್ಗಗಳಲ್ಲಿ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಮಹದೇವಪ್ಪ ಮುಂಜಿ ತಿಳಿಸಿದ್ದಾರೆ.