<p><strong>ಬೆಳಗಾವಿ</strong>: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನಗಳ ಸೇವೆ ರದ್ದಾಗುತ್ತಿದೆ. ಇದರಿಂದ ಸಾಂಬ್ರಾ ನಿಲ್ದಾಣ ಸೊರಗುತ್ತಿದ್ದು, ಪ್ರಯಾಣಿಕರ ಸಂಖ್ಯೆಯೂ ಕುಸಿಯುತ್ತಿದೆ.</p>.<p>2024-25ನೇ ಸಾಲಿನಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಮಾರ್ಗವಾಗಿ 3,40,295 ಜನರು ಪ್ರಯಾಣಿಸಿದ್ದರು. 2025–26ನೇ ಸಾಲಿನಲ್ಲಿ ಆ ಸಂಖ್ಯೆ 3,01,516ಕ್ಕೆ (ಶೇ 11.4ರಷ್ಟು ಕಡಿಮೆ) ಇಳಿಕೆಯಾಗಿದೆ.</p>.<p>‘ಪ್ರಯಾಣಿಕರಿಂದ ಉತ್ತಮ ಸ್ಪಂದನೆಯಿದ್ದರೂ ವಿವಿಧ ಮಾರ್ಗಗಳಲ್ಲಿ ಸೇವೆ ರದ್ದುಪಡಿಸಿದ್ದಕ್ಕೆ ಜನರಿಂದ, ಅದರಲ್ಲೂ ಉದ್ಯಮಿಗಳಿಂದ ಅಸಮಾಧಾನವಿದೆ. ಇಲ್ಲಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನಗಳ ಸಂಖ್ಯೆ ಪ್ರಮಾಣ ಕುಸಿಯಲು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣ’ ಎಂಬ ಆರೋಪವಿದೆ.</p>.<p>‘ಯಾವುದೇ ಮಾರ್ಗದಲ್ಲಿ ಸೇವೆ ರದ್ದುಪಡಿಸಬೇಡಿ. ರದ್ದಾದ ಮಾರ್ಗಗಳಲ್ಲಿ ಪುನಃ ಆರಂಭಿಸಿ ಎಂದು ನಾವು ಕೋರಿದ್ದೇವೆ. ಆದರೆ, ಇಂಧನ ದರ ಹೆಚ್ಚಳ ಕಾರಣಕ್ಕೆ ವಿಮಾನಯಾನ ಸಂಸ್ಥೆಗಳು ಮನಸ್ಸು ಮಾಡುತ್ತಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳುತ್ತಾರೆ.</p>.<p>‘ಉಡಾನ್–3’ ಯೋಜನೆಯಡಿ ಸಾಂಬ್ರಾದಿಂದ ಮುಂಬೈ, ಪುಣೆ, ಹೈದರಾಬಾದ್, ತಿರುಪತಿ, ಸೂರತ್, ಕಡಪ, ಮೈಸೂರು, ಇಂದೋರ್, ಜೋಧಪುರ, ಅಹಮದಾ ಬಾದ್, ನಾಸಿಕ್ ಮತ್ತು ನಾಗ್ಪುರಕ್ಕೆ ನೇರ ವಿಮಾನಗಳು 2019ರಿಂದ ಹಾರಾಟ ನಡೆಸಿದ್ದವು. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.</p>.<p>ಆದರೂ, ಯೋಜನೆ ಮುಗಿದ ಕಾರಣ ವಿಮಾನಯಾನ ಸಂಸ್ಥೆಗಳು ಹಂತ–ಹಂತವಾಗಿ ಸೇವೆ ಸ್ಥಗಿತಗೊಳಿಸಿದವು. ‘ಉಡಾನ್–3’ ಯೋಜನೆಯಡಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲ ವಿಮಾನಗಳ ಸೇವೆ ಈ ವರ್ಷ ರದ್ದಾಗಿದೆ.</p>.<p>ಸದ್ಯ ಸಾಂಬ್ರಾದಿಂದ ದೆಹಲಿ, ಹೈದರಾಬಾದ್, ಬೆಂಗಳೂರು, ನವಿ ಮುಂಬೈ ಮತ್ತು ಮುಂಬೈ ಮಾರ್ಗದಲ್ಲಿ ನಿತ್ಯ ಆರು ವಿಮಾನಗಳು(12 ಟ್ರಿಪ್) ಕಾರ್ಯಾಚರಣೆ ಮಾಡುತ್ತಿವೆ.</p>.<p><strong>ಉಡಾನ್–3 ಯೋಜನೆ ಅವಧಿ ಮುಗಿದಿದ್ದರಿಂದ ಮತ್ತು ಇಂಧನ ದರ ಹೆಚ್ಚಳದ ಕಾರಣಕ್ಕೆ, ವಿಮಾನಯಾನ ಸಂಸ್ಥೆಗಳು ಹಲವು ಮಾರ್ಗಗಳಲ್ಲಿನ ಸೇವೆ ರದ್ದುಪಡಿಸಿವೆ. ಅಹಮದಾಬಾದ್ ಮಾರ್ಗದಲ್ಲಿ ಶೀಘ್ರ ಸೇವೆ ಆರಂಭದ ನಿರೀಕ್ಷೆ ಇದೆ</strong></p><p><strong>–ಎಸ್.ತ್ಯಾಗರಾಜನ್, ನಿರ್ದೇಶಕ, ಸಾಂಬ್ರಾ ವಿಮಾನ ನಿಲ್ದಾಣ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನಗಳ ಸೇವೆ ರದ್ದಾಗುತ್ತಿದೆ. ಇದರಿಂದ ಸಾಂಬ್ರಾ ನಿಲ್ದಾಣ ಸೊರಗುತ್ತಿದ್ದು, ಪ್ರಯಾಣಿಕರ ಸಂಖ್ಯೆಯೂ ಕುಸಿಯುತ್ತಿದೆ.</p>.<p>2024-25ನೇ ಸಾಲಿನಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಮಾರ್ಗವಾಗಿ 3,40,295 ಜನರು ಪ್ರಯಾಣಿಸಿದ್ದರು. 2025–26ನೇ ಸಾಲಿನಲ್ಲಿ ಆ ಸಂಖ್ಯೆ 3,01,516ಕ್ಕೆ (ಶೇ 11.4ರಷ್ಟು ಕಡಿಮೆ) ಇಳಿಕೆಯಾಗಿದೆ.</p>.<p>‘ಪ್ರಯಾಣಿಕರಿಂದ ಉತ್ತಮ ಸ್ಪಂದನೆಯಿದ್ದರೂ ವಿವಿಧ ಮಾರ್ಗಗಳಲ್ಲಿ ಸೇವೆ ರದ್ದುಪಡಿಸಿದ್ದಕ್ಕೆ ಜನರಿಂದ, ಅದರಲ್ಲೂ ಉದ್ಯಮಿಗಳಿಂದ ಅಸಮಾಧಾನವಿದೆ. ಇಲ್ಲಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನಗಳ ಸಂಖ್ಯೆ ಪ್ರಮಾಣ ಕುಸಿಯಲು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣ’ ಎಂಬ ಆರೋಪವಿದೆ.</p>.<p>‘ಯಾವುದೇ ಮಾರ್ಗದಲ್ಲಿ ಸೇವೆ ರದ್ದುಪಡಿಸಬೇಡಿ. ರದ್ದಾದ ಮಾರ್ಗಗಳಲ್ಲಿ ಪುನಃ ಆರಂಭಿಸಿ ಎಂದು ನಾವು ಕೋರಿದ್ದೇವೆ. ಆದರೆ, ಇಂಧನ ದರ ಹೆಚ್ಚಳ ಕಾರಣಕ್ಕೆ ವಿಮಾನಯಾನ ಸಂಸ್ಥೆಗಳು ಮನಸ್ಸು ಮಾಡುತ್ತಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳುತ್ತಾರೆ.</p>.<p>‘ಉಡಾನ್–3’ ಯೋಜನೆಯಡಿ ಸಾಂಬ್ರಾದಿಂದ ಮುಂಬೈ, ಪುಣೆ, ಹೈದರಾಬಾದ್, ತಿರುಪತಿ, ಸೂರತ್, ಕಡಪ, ಮೈಸೂರು, ಇಂದೋರ್, ಜೋಧಪುರ, ಅಹಮದಾ ಬಾದ್, ನಾಸಿಕ್ ಮತ್ತು ನಾಗ್ಪುರಕ್ಕೆ ನೇರ ವಿಮಾನಗಳು 2019ರಿಂದ ಹಾರಾಟ ನಡೆಸಿದ್ದವು. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.</p>.<p>ಆದರೂ, ಯೋಜನೆ ಮುಗಿದ ಕಾರಣ ವಿಮಾನಯಾನ ಸಂಸ್ಥೆಗಳು ಹಂತ–ಹಂತವಾಗಿ ಸೇವೆ ಸ್ಥಗಿತಗೊಳಿಸಿದವು. ‘ಉಡಾನ್–3’ ಯೋಜನೆಯಡಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲ ವಿಮಾನಗಳ ಸೇವೆ ಈ ವರ್ಷ ರದ್ದಾಗಿದೆ.</p>.<p>ಸದ್ಯ ಸಾಂಬ್ರಾದಿಂದ ದೆಹಲಿ, ಹೈದರಾಬಾದ್, ಬೆಂಗಳೂರು, ನವಿ ಮುಂಬೈ ಮತ್ತು ಮುಂಬೈ ಮಾರ್ಗದಲ್ಲಿ ನಿತ್ಯ ಆರು ವಿಮಾನಗಳು(12 ಟ್ರಿಪ್) ಕಾರ್ಯಾಚರಣೆ ಮಾಡುತ್ತಿವೆ.</p>.<p><strong>ಉಡಾನ್–3 ಯೋಜನೆ ಅವಧಿ ಮುಗಿದಿದ್ದರಿಂದ ಮತ್ತು ಇಂಧನ ದರ ಹೆಚ್ಚಳದ ಕಾರಣಕ್ಕೆ, ವಿಮಾನಯಾನ ಸಂಸ್ಥೆಗಳು ಹಲವು ಮಾರ್ಗಗಳಲ್ಲಿನ ಸೇವೆ ರದ್ದುಪಡಿಸಿವೆ. ಅಹಮದಾಬಾದ್ ಮಾರ್ಗದಲ್ಲಿ ಶೀಘ್ರ ಸೇವೆ ಆರಂಭದ ನಿರೀಕ್ಷೆ ಇದೆ</strong></p><p><strong>–ಎಸ್.ತ್ಯಾಗರಾಜನ್, ನಿರ್ದೇಶಕ, ಸಾಂಬ್ರಾ ವಿಮಾನ ನಿಲ್ದಾಣ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>