<p><strong>ಬೆಳಗಾವಿ</strong>: ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಶಿರಸ್ತೇದಾರ ಸಂಜೀವ ಮುತ್ತೆಪ್ಪಗೋಳ ಅವರ ಎಸ್ಬಿಐ ಖಾತೆ ಹ್ಯಾಕ್ ಮಾಡಿ, ₹90 ಸಾವಿರ ಹಣ ಕಬಳಿಸಿದ ಬಗ್ಗೆ ದೂರು ದಾಖಲಾಗಿದೆ.</p>.<p>ಸಂಜೀವ ಅವರು ಮಾರ್ಚ್ ಬೆಳಗಾವಿ ನಗರದಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಲು ಆನ್ಲೈನ್ನಲ್ಲಿ ಕಾರ್ ಬುಕ್ ಮಾಡಲು ಮುಂದಾಗಿದ್ದರು. ‘ಲಕ್ಷ್ಮೀ ಕಾರ್ ರೆಂಟಲ್ ಗೋವಾ’ ಎಂಬ ವೆಬ್ಸೈಟ್ ಮೂಲಕ ಕಾರ್ ಬುಕ್ ಮಾಡಲು ಮುಂದಾದರು.</p>.<p>ಈ ವೆಬ್ಸೈಟಿಗೆ ಸಂಭಂಧಿಸಿದ ನೀಲಂ ರಜಪೂತ ಎಂಬ ವ್ಯಕ್ತಿ ಕರೆ ಮಾಡಿ ₹800 ಪಾವತಿಸಿ ಕಾರ್ ಬುಕ್ ಮಾಡಬಹುದು ಎಂದು ತಿಳಿಸಿದ. ಅದು ಸಾಧ್ಯವಾಗದಿದ್ದಾಗ ಕಾರ್ ರೆಂಟಲ್ ಎಂಬ ನಕಲಿ ಆ್ಯಪ್ನ ಡೌನ್ಲೋಡ್ ಮಾಡಲು ಆರೋಪಿ ತಿಳಿಸಿದ. ಅದರಲ್ಲೂ ₹149 ಹಣವನ್ನು ಪೋನ್ ಪೇ ಮೂಲಕ ಹಾಕಿದರೂ ಕಾರ್ ಬುಕ್ ಆಗಲಿಲ್ಲ.</p>.<p>ತಾಂತ್ರಿಕ ಕಾರಣವಿದೆ ವಿಡಿಯೊ ಕಾಲ್ ಮಾಡಿ ನಿಮ್ಮ ಫೋನ್ ಸ್ಕ್ರೀನ್ ಶೇರ್ ಮಾಡಿ ಎಂದು ಆರೋಪಿ ಹೇಳಿದ. ಅದರಂತೆ ಸಂಜೀವ ಅವರು ಕೇಳಿದರು. ಅವರ ಅರಿವಿಗೇ ಬಾರದಂತೆ ಅಕೌಂಟಿನಲ್ಲಿದ್ದ ₹90 ಸಾವಿರ ಹಣವನ್ನು ಆರೋಪಿ ಕಬಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-21-1939576342</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಶಿರಸ್ತೇದಾರ ಸಂಜೀವ ಮುತ್ತೆಪ್ಪಗೋಳ ಅವರ ಎಸ್ಬಿಐ ಖಾತೆ ಹ್ಯಾಕ್ ಮಾಡಿ, ₹90 ಸಾವಿರ ಹಣ ಕಬಳಿಸಿದ ಬಗ್ಗೆ ದೂರು ದಾಖಲಾಗಿದೆ.</p>.<p>ಸಂಜೀವ ಅವರು ಮಾರ್ಚ್ ಬೆಳಗಾವಿ ನಗರದಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಲು ಆನ್ಲೈನ್ನಲ್ಲಿ ಕಾರ್ ಬುಕ್ ಮಾಡಲು ಮುಂದಾಗಿದ್ದರು. ‘ಲಕ್ಷ್ಮೀ ಕಾರ್ ರೆಂಟಲ್ ಗೋವಾ’ ಎಂಬ ವೆಬ್ಸೈಟ್ ಮೂಲಕ ಕಾರ್ ಬುಕ್ ಮಾಡಲು ಮುಂದಾದರು.</p>.<p>ಈ ವೆಬ್ಸೈಟಿಗೆ ಸಂಭಂಧಿಸಿದ ನೀಲಂ ರಜಪೂತ ಎಂಬ ವ್ಯಕ್ತಿ ಕರೆ ಮಾಡಿ ₹800 ಪಾವತಿಸಿ ಕಾರ್ ಬುಕ್ ಮಾಡಬಹುದು ಎಂದು ತಿಳಿಸಿದ. ಅದು ಸಾಧ್ಯವಾಗದಿದ್ದಾಗ ಕಾರ್ ರೆಂಟಲ್ ಎಂಬ ನಕಲಿ ಆ್ಯಪ್ನ ಡೌನ್ಲೋಡ್ ಮಾಡಲು ಆರೋಪಿ ತಿಳಿಸಿದ. ಅದರಲ್ಲೂ ₹149 ಹಣವನ್ನು ಪೋನ್ ಪೇ ಮೂಲಕ ಹಾಕಿದರೂ ಕಾರ್ ಬುಕ್ ಆಗಲಿಲ್ಲ.</p>.<p>ತಾಂತ್ರಿಕ ಕಾರಣವಿದೆ ವಿಡಿಯೊ ಕಾಲ್ ಮಾಡಿ ನಿಮ್ಮ ಫೋನ್ ಸ್ಕ್ರೀನ್ ಶೇರ್ ಮಾಡಿ ಎಂದು ಆರೋಪಿ ಹೇಳಿದ. ಅದರಂತೆ ಸಂಜೀವ ಅವರು ಕೇಳಿದರು. ಅವರ ಅರಿವಿಗೇ ಬಾರದಂತೆ ಅಕೌಂಟಿನಲ್ಲಿದ್ದ ₹90 ಸಾವಿರ ಹಣವನ್ನು ಆರೋಪಿ ಕಬಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-21-1939576342</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>