<p><strong>ಬೆಳಗಾವಿ:</strong> ರಾಜ್ಯದ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ₹4,700 ಕೋಟಿ ಬಿಲ್ ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಇಲ್ಲಿನ ಸಕ್ಕರೆ ಆಯುಕ್ತರ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</p><p>ಮುಖಂಡ ಚೂನಪ್ಪ ಪೂಜೇರಿ, ‘ರೈತರು ಕಬ್ಬು ಪೂರೈಸಿದ ₹4,700 ಕೋಟಿ ಬಿಲ್ ಅನ್ನು ಸಕ್ಕರೆ ಕಾರ್ಖಾನೆಗಳು ನೀಡಬೇಕಿದೆ. ಆದರೆ, ದಿನಕ್ಕೊಂದು ನೆಪ ಹೇಳುತ್ತ ಅಲೆದಾಡಿಸುತ್ತಿವೆ’ ಎಂದು ದೂರಿದರು.</p><p>‘ಪ್ರತಿ ಟನ್ ಕಬ್ಬಿಗೆ ಸರ್ಕಾರ ₹3,300 ದರ ನಿಗದಿಪಡಿಸಿತ್ತು. ಆದರೆ, ಕಾರ್ಖಾನೆಗಳು ನಿಗದಿಯಂತೆ ದರ ಕೊಟ್ಟಿಲ್ಲ. ಸರ್ಕಾರ ₹300 ಕೋಟಿ ಸಬ್ಸಿಡಿ ನೀಡಿದ್ದರೂ, ಕಾರ್ಖಾನೆಗಳು ರೈತರಿಗೆ ನೀಡದೆ ಮೋಸ ಮಾಡುತ್ತಿವೆ’ ಎಂದು ಆಪಾದಿಸಿದರು.</p><p>ತ್ವರಿತವಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.</p><p>ಮಹೇಶ ಸುಬೇದಾರ, ಸೋಮು ಬಿರಾದಾರ, ಈರಣ್ಣ ಸಸಾಲಟ್ಟಿ, ಸಂಗಮೇಶ ಸಾಗರ ಇತರರಿದ್ದರು.</p><p>ಪ್ರತಿಭಟನಾ ಸ್ಥಳದಲ್ಲೇ ಅಡುಗೆ ಮಾಡಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ರಾಜ್ಯದ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ₹4,700 ಕೋಟಿ ಬಿಲ್ ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಇಲ್ಲಿನ ಸಕ್ಕರೆ ಆಯುಕ್ತರ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.</p><p>ಮುಖಂಡ ಚೂನಪ್ಪ ಪೂಜೇರಿ, ‘ರೈತರು ಕಬ್ಬು ಪೂರೈಸಿದ ₹4,700 ಕೋಟಿ ಬಿಲ್ ಅನ್ನು ಸಕ್ಕರೆ ಕಾರ್ಖಾನೆಗಳು ನೀಡಬೇಕಿದೆ. ಆದರೆ, ದಿನಕ್ಕೊಂದು ನೆಪ ಹೇಳುತ್ತ ಅಲೆದಾಡಿಸುತ್ತಿವೆ’ ಎಂದು ದೂರಿದರು.</p><p>‘ಪ್ರತಿ ಟನ್ ಕಬ್ಬಿಗೆ ಸರ್ಕಾರ ₹3,300 ದರ ನಿಗದಿಪಡಿಸಿತ್ತು. ಆದರೆ, ಕಾರ್ಖಾನೆಗಳು ನಿಗದಿಯಂತೆ ದರ ಕೊಟ್ಟಿಲ್ಲ. ಸರ್ಕಾರ ₹300 ಕೋಟಿ ಸಬ್ಸಿಡಿ ನೀಡಿದ್ದರೂ, ಕಾರ್ಖಾನೆಗಳು ರೈತರಿಗೆ ನೀಡದೆ ಮೋಸ ಮಾಡುತ್ತಿವೆ’ ಎಂದು ಆಪಾದಿಸಿದರು.</p><p>ತ್ವರಿತವಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.</p><p>ಮಹೇಶ ಸುಬೇದಾರ, ಸೋಮು ಬಿರಾದಾರ, ಈರಣ್ಣ ಸಸಾಲಟ್ಟಿ, ಸಂಗಮೇಶ ಸಾಗರ ಇತರರಿದ್ದರು.</p><p>ಪ್ರತಿಭಟನಾ ಸ್ಥಳದಲ್ಲೇ ಅಡುಗೆ ಮಾಡಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>