<p><strong>ಬಂಬರಗಾ (ಬೆಳಗಾವಿ):</strong> ಯುದ್ಧದಿಂದಾಗಿ ಅಡುಗೆ ಅನಿಲ ಸಿಲಿಂಡರ್ಗೆ ಇತರೆಡೆ ಸಮಸ್ಯೆ ಇದ್ದರೂ ಬೆಳಗಾವಿ ತಾಲ್ಲೂಕಿನ ಬಂಬರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳ ಜನರು ಈಗಲೂ ನಿರಾಳವಾಗಿದ್ದಾರೆ.</p>.<p>ಮೂರು ದಶಕದ ಹಿಂದೆ ಅವರು ನಿರ್ಮಿಸಿಕೊಂಡಿದ್ದ ಜೈವಿಕ ಅನಿಲ ಘಟಕಗಳು (ಬಯೋಗ್ಯಾಸ್ ಘಟಕ) ಆಯಾ ಕುಟುಂಬಕ್ಕೆ ಅಗತ್ಯವಿರುವ ಇಂಧನ ಉತ್ಪಾದಿಸಿ, ಅವರನ್ನು ಸ್ವಾವಲಂಬಿಯಾಗಿಸಿವೆ.</p>.<p>ಬಂಬರಗಾ, ಕಟ್ಟಣಭಾವಿ, ಗುಗ್ರ್ಯಾನಟ್ಟಿ, ಗೋಡಿಹಾಳ, ಹೊಸೂರ, ಗೋರಾಮಟ್ಟಿ, ನಿಂಗ್ಯಾನಟ್ಟಿ, ಹಳೇ ಇದ್ದಲಹೊಂಡ, ಹೊಸ ಇದ್ದಲಹೊಂಡದಲ್ಲಿ ಸಾಲು ಸಾಲಾಗಿ ಜೈವಿಕ ಅನಿಲ ಘಟಕಗಳೇ ಕಣ್ಣಿಗೆ ಬೀಳುತ್ತವೆ. </p>.<p>‘1990ರ ದಶಕದವರೆಗೆ ಈ ಗ್ರಾಮಗಳ ನಿವಾಸಿಗಳು ಅಡುಗೆಗಾಗಿ ಉರುವಲು ಬಳಸುತ್ತಿದ್ದರು. ಇದರಿಂದ ಪರಿಸರಕ್ಕೂ ಹಾನಿಯಾಗುತ್ತಿತ್ತು. ಮತ್ತೊಂದೆಡೆ ಬಹುತೇಕರ ಮನೆಯಲ್ಲಿ ಜಾನುವಾರುಗಳಿದ್ದವು. ಅವುಗಳ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆಗೆ ಅವಕಾಶವಿತ್ತು. ಹೀಗಾಗಿ, ಜೈವಿಕ ಅನಿಲ ಘಟಕ ಸ್ಥಾಪಿಸಲು ಜನ ಜಾಗರಣ ಸಂಸ್ಥೆಯು ಜಾಗೃತಿ ಮೂಡಿಸಿದೆ. ಅದು ಈಗ ಫಲ ಕೊಟ್ಟಿದೆ’ ಎಂದು ಪರಿಸರವಾದಿ ಶಿವಾಜಿ ಕಾಗಣಿಕರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ 9 ಹಳ್ಳಿಗಳ ಜನಸಂಖ್ಯೆ 6,990 ಇದೆ. 1,679 ಮನೆಗಳಿವೆ. 893 ಮನೆಗಳಲ್ಲಿ ಜೈವಿಕ ಅನಿಲ ಉತ್ಪಾದನೆ ಘಟಕಗಳಿವೆ. ತುರ್ತು ಸಂದರ್ಭದಲ್ಲಿ ಮಾತ್ರ ಪರ್ಯಾಯ ಇಂಧನ ಮೂಲವಾಗಿ ಎಲ್ಪಿಜಿ ಸಿಲಿಂಡರ್ಗಳನ್ನು ಹೊಂದಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿ.ಕೆ.ತಳವಾರ ಹೇಳಿದರು.</p>.<p>‘ನಮ್ಮ ಮನೆಯಲ್ಲಿ ಜೈವಿಕ ಅನಿಲ ಘಟಕ 35 ವರ್ಷಗಳಿಂದ ಇದೆ. ನಮ್ಮದು ಅವಿಭಜಿತ ಕುಟುಂಬವಾಗಿದ್ದು, ಎಂದಿಗೂ ಅಡುಗೆ ಇಂಧನದ ಕೊರತೆ ಎದುರಿಸಲಿಲ್ಲ. ಅನಿಲ ಉತ್ಪಾದನೆ ನಂತರ ಉಳಿವ ತ್ಯಾಜ್ಯ ಹೊಲಕ್ಕೆ ಗೊಬ್ಬರವಾಗಿ ಬಳಸುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಹಾದೇವಿ ಮನಗುತ್ತಕರ ಹೇಳಿದರು.</p>.<p>‘ಹಿಂದೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಜೈವಿಕ ಅನಿಲ ಘಟಕ ಸ್ಥಾಪಿಸಲು ಅವಕಾಶ ನೀಡುತ್ತಿತ್ತು. ಜನಜಾಗರಣ ಸಂಸ್ಥೆ ಮೂಲಕ ಶಿವಾಜಿ ಕಾಗಣಿಕರ ಅದನ್ನು ಮುಂದುವರಿಸಿದರು. ಇಂದು ಜಿಲ್ಲೆಯಲ್ಲಿ ಅತಿಹೆಚ್ಚು ಕಾರ್ಯನಿರ್ವಹಿಸುವ ಜೈವಿಕ ಅನಿಲ ಘಟಕಗಳಿವೆ’ ಎನ್ನುತ್ತಾರೆ ಪರಿಸರವಾದಿ ದಿಲೀಪ ಕಾಮತ.</p><p>–––––––</p>.<p><strong>ಮನೆ ಹಿತ್ತಲಲ್ಲಿ 15 ವರ್ಷಗಳಿಂದ ಜೈವಿಕ ಅನಿಲ ಘಟಕ ಇದೆ. ಅದನ್ನೇ ಬಳಸಿ ನಿತ್ಯವೂ ಅಡುಗೆ ಮಾಡುತ್ತೇವೆ. ತುರ್ತು ಇದ್ದಾಗ ಮತ್ತು ಹೆಚ್ಚು ಜನರು ಬಂದಾಗ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬಳಸುತ್ತೇವೆ</strong></p><p><strong>–ರೇಣುಕಾ ಕಾಮನ್ನಾಚೆ ಗ್ರಾಮಸ್ಥೆ</strong></p><p>––</p>.<p><strong>ನಮ್ಮಲ್ಲಿ ಅರ್ಧಕ್ಕಿಂತ ಹೆಚ್ಚು ಮನೆಗಳಲ್ಲಿ ಜೈವಿಕ ಅನಿಲ ಘಟಕಗಳಿವೆ. ಇಂದಿಗೂ ಅವು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಅಡುಗೆ ಅನಿಲ ಕೊರತೆ ಸಮಸ್ಯೆ ನಮಗೆ ಕಾಡಿಲ್ಲ</strong></p><p><strong>–ಸುನೀತಾ ಪಾಟೀಲ ಪಿಡಿಒ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಬರಗಾ (ಬೆಳಗಾವಿ):</strong> ಯುದ್ಧದಿಂದಾಗಿ ಅಡುಗೆ ಅನಿಲ ಸಿಲಿಂಡರ್ಗೆ ಇತರೆಡೆ ಸಮಸ್ಯೆ ಇದ್ದರೂ ಬೆಳಗಾವಿ ತಾಲ್ಲೂಕಿನ ಬಂಬರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳ ಜನರು ಈಗಲೂ ನಿರಾಳವಾಗಿದ್ದಾರೆ.</p>.<p>ಮೂರು ದಶಕದ ಹಿಂದೆ ಅವರು ನಿರ್ಮಿಸಿಕೊಂಡಿದ್ದ ಜೈವಿಕ ಅನಿಲ ಘಟಕಗಳು (ಬಯೋಗ್ಯಾಸ್ ಘಟಕ) ಆಯಾ ಕುಟುಂಬಕ್ಕೆ ಅಗತ್ಯವಿರುವ ಇಂಧನ ಉತ್ಪಾದಿಸಿ, ಅವರನ್ನು ಸ್ವಾವಲಂಬಿಯಾಗಿಸಿವೆ.</p>.<p>ಬಂಬರಗಾ, ಕಟ್ಟಣಭಾವಿ, ಗುಗ್ರ್ಯಾನಟ್ಟಿ, ಗೋಡಿಹಾಳ, ಹೊಸೂರ, ಗೋರಾಮಟ್ಟಿ, ನಿಂಗ್ಯಾನಟ್ಟಿ, ಹಳೇ ಇದ್ದಲಹೊಂಡ, ಹೊಸ ಇದ್ದಲಹೊಂಡದಲ್ಲಿ ಸಾಲು ಸಾಲಾಗಿ ಜೈವಿಕ ಅನಿಲ ಘಟಕಗಳೇ ಕಣ್ಣಿಗೆ ಬೀಳುತ್ತವೆ. </p>.<p>‘1990ರ ದಶಕದವರೆಗೆ ಈ ಗ್ರಾಮಗಳ ನಿವಾಸಿಗಳು ಅಡುಗೆಗಾಗಿ ಉರುವಲು ಬಳಸುತ್ತಿದ್ದರು. ಇದರಿಂದ ಪರಿಸರಕ್ಕೂ ಹಾನಿಯಾಗುತ್ತಿತ್ತು. ಮತ್ತೊಂದೆಡೆ ಬಹುತೇಕರ ಮನೆಯಲ್ಲಿ ಜಾನುವಾರುಗಳಿದ್ದವು. ಅವುಗಳ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆಗೆ ಅವಕಾಶವಿತ್ತು. ಹೀಗಾಗಿ, ಜೈವಿಕ ಅನಿಲ ಘಟಕ ಸ್ಥಾಪಿಸಲು ಜನ ಜಾಗರಣ ಸಂಸ್ಥೆಯು ಜಾಗೃತಿ ಮೂಡಿಸಿದೆ. ಅದು ಈಗ ಫಲ ಕೊಟ್ಟಿದೆ’ ಎಂದು ಪರಿಸರವಾದಿ ಶಿವಾಜಿ ಕಾಗಣಿಕರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ 9 ಹಳ್ಳಿಗಳ ಜನಸಂಖ್ಯೆ 6,990 ಇದೆ. 1,679 ಮನೆಗಳಿವೆ. 893 ಮನೆಗಳಲ್ಲಿ ಜೈವಿಕ ಅನಿಲ ಉತ್ಪಾದನೆ ಘಟಕಗಳಿವೆ. ತುರ್ತು ಸಂದರ್ಭದಲ್ಲಿ ಮಾತ್ರ ಪರ್ಯಾಯ ಇಂಧನ ಮೂಲವಾಗಿ ಎಲ್ಪಿಜಿ ಸಿಲಿಂಡರ್ಗಳನ್ನು ಹೊಂದಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿ.ಕೆ.ತಳವಾರ ಹೇಳಿದರು.</p>.<p>‘ನಮ್ಮ ಮನೆಯಲ್ಲಿ ಜೈವಿಕ ಅನಿಲ ಘಟಕ 35 ವರ್ಷಗಳಿಂದ ಇದೆ. ನಮ್ಮದು ಅವಿಭಜಿತ ಕುಟುಂಬವಾಗಿದ್ದು, ಎಂದಿಗೂ ಅಡುಗೆ ಇಂಧನದ ಕೊರತೆ ಎದುರಿಸಲಿಲ್ಲ. ಅನಿಲ ಉತ್ಪಾದನೆ ನಂತರ ಉಳಿವ ತ್ಯಾಜ್ಯ ಹೊಲಕ್ಕೆ ಗೊಬ್ಬರವಾಗಿ ಬಳಸುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಹಾದೇವಿ ಮನಗುತ್ತಕರ ಹೇಳಿದರು.</p>.<p>‘ಹಿಂದೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಜೈವಿಕ ಅನಿಲ ಘಟಕ ಸ್ಥಾಪಿಸಲು ಅವಕಾಶ ನೀಡುತ್ತಿತ್ತು. ಜನಜಾಗರಣ ಸಂಸ್ಥೆ ಮೂಲಕ ಶಿವಾಜಿ ಕಾಗಣಿಕರ ಅದನ್ನು ಮುಂದುವರಿಸಿದರು. ಇಂದು ಜಿಲ್ಲೆಯಲ್ಲಿ ಅತಿಹೆಚ್ಚು ಕಾರ್ಯನಿರ್ವಹಿಸುವ ಜೈವಿಕ ಅನಿಲ ಘಟಕಗಳಿವೆ’ ಎನ್ನುತ್ತಾರೆ ಪರಿಸರವಾದಿ ದಿಲೀಪ ಕಾಮತ.</p><p>–––––––</p>.<p><strong>ಮನೆ ಹಿತ್ತಲಲ್ಲಿ 15 ವರ್ಷಗಳಿಂದ ಜೈವಿಕ ಅನಿಲ ಘಟಕ ಇದೆ. ಅದನ್ನೇ ಬಳಸಿ ನಿತ್ಯವೂ ಅಡುಗೆ ಮಾಡುತ್ತೇವೆ. ತುರ್ತು ಇದ್ದಾಗ ಮತ್ತು ಹೆಚ್ಚು ಜನರು ಬಂದಾಗ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬಳಸುತ್ತೇವೆ</strong></p><p><strong>–ರೇಣುಕಾ ಕಾಮನ್ನಾಚೆ ಗ್ರಾಮಸ್ಥೆ</strong></p><p>––</p>.<p><strong>ನಮ್ಮಲ್ಲಿ ಅರ್ಧಕ್ಕಿಂತ ಹೆಚ್ಚು ಮನೆಗಳಲ್ಲಿ ಜೈವಿಕ ಅನಿಲ ಘಟಕಗಳಿವೆ. ಇಂದಿಗೂ ಅವು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಅಡುಗೆ ಅನಿಲ ಕೊರತೆ ಸಮಸ್ಯೆ ನಮಗೆ ಕಾಡಿಲ್ಲ</strong></p><p><strong>–ಸುನೀತಾ ಪಾಟೀಲ ಪಿಡಿಒ</strong></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>