ಉಗರಗೋಳ (ಸವದತ್ತಿ ತಾ.): ‘ಕೋವಿಡ್ ಹರಡುವಿಕೆ ನಿಯಂತ್ರಣದ ದೃಷ್ಟಿಯಿಂದ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಮತ್ತು ಜೋಗುಳಬಾವಿ ಸತ್ಯೆಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಫೆ. 27ರಂದು ಯಲ್ಲಮ್ಮನಗುಡ್ಡದಲ್ಲಿ ನಡೆಯಬೇಕಿದ್ದ ‘ಭಾರತ ಹುಣ್ಣಿಮೆ’ ಜಾತ್ರೆ ರದ್ದುಪಡಿಸಲಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.