‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು, ಕೃಷಿಯೇತರ ಭೂಮಿ ಖರೀದಿಯಲ್ಲಿ ಅಡಚಣೆ ಆಗದಂತೆ ತಡೆಯುವುದೇ ಆಗಿದೆ. ಇದರೊಂದಿಗೆ ಉದ್ಯೋಗ ಸೃಷ್ಟಿಸಲು ಕೂಡ ನೆರವಾಗಲಿದೆ. ಇಲ್ಲಿನ ಕೃಷಿ ಉತ್ಪನ್ನಗಳ ರಪ್ತು ಹೆಚ್ಚಳವಾಗಿ ರಾಜ್ಯಕ್ಕೆ ಲಾಭವಾಗಲಿದೆ. ಜೊತೆಗೆ ಕೃಷಿ ಮಾಡಲು ಬಯಸುವವರಿಗೆ ಸಹಾಯವಾಗಲಿದೆ. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆಯಿಂದ ಕೃಷಿ ಉತ್ಪಾದನೆ ಅಥವಾ ಪಾಲನೆಗಾಗಿ ರೈತ ಖರೀದಿದಾರರ ಮಧ್ಯೆ ನೇರವಾದ ಒಪ್ಪಂದ ಮಾಡಿಕೊಳ್ಳಬಹುದು’ ಎಂದು ಸಮರ್ಥಿಸಿಕೊಂಡರು.