ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ನವೆಂಬರ್ನಲ್ಲಿ ಬುಡಾ ಸಭೆ ಆಗಿತ್ತು. ಇದಾದ ಬಳಿಕ ಯಾವುದೇ ಸಭೆ ನಡೆದಿಲ್ಲ. ಮುಂದಿನ ಬಾರಿಯೂ ಬಿಜೆಪಿ ಶಾಸಕರು ಆಗಮಿಸದಿದ್ದರೆ ಅಧ್ಯಕ್ಷರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ನೋಡಬೇಕು. ಕೋರಂ ಅಭಾವದಿಂದಾಗಿ ಯಾವುದೇ ರೀತಿ ಚರ್ಚೆ ಆಗಲಿಲ್ಲ. ‘ಕಣಬರಗಿ ಯೋಜನೆ–61’ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ತಿಳಿಸಿದರು.