‘ಕಾರ್ಗಿಲ್ ಯುದ್ಧದ ನಂತರ ಭಾರತೀಯ ವಾಯುಸೇನೆ, ಭೂಸೇನೆ, ನೌಕಾದಳಗಳ ಮುಖ್ಯಸ್ಥರು ಹಾಗೂ ನೇತಾರರ ಸಮಿತಿ ರಚಿಸಿಲಾಗಿತ್ತು. ಆ ಸಮಿತಿ ಸುದೀರ್ಘ ಚಿಂತನೆ ನಡೆಸಿ, ಚರ್ಚೆ ಮಾಡಿ, ವಿಶ್ವದ ಬೇರೆಬೇರೆ ದೇಶಗಳ ಪರಿಸ್ಥಿತಿಯನ್ನು ಗಮನಿಸಿ ‘ಅಗ್ನಿಪಥ’ ಯೋಜನೆ ರೂಪಿಸಿದೆ. ದೇಶದ ಭವಿಷ್ಯ ಭದ್ರವಾಗಲು, ಯುಜವನರು ಉದ್ಯೋಗದಲ್ಲಿ ತೊಡಗಲು ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಬೇಕಾದ ಎಲ್ಲ ಅಂಶಗಳನ್ನೂ ಇದರಲ್ಲಿ ಪರಿಗಣಿಸಲಾಗಿದೆ. ಇಂಥ ಮಹತ್ವಪೂರ್ಣ ಯೋಜನೆಯ ಕಿಂಚಿತ್ತು ಅರಿವೂ ಇಲ್ಲದೇ ಕಾಂಗ್ರೆಸ್ಸಿಗರು ಹೋರಾಟ ನಡೆಸಿದ್ದಾರೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.