ತಾಲ್ಲೂಕಿನ ಅಂಬೆವಾಡಿಯ 40 ವರ್ಷದ ವ್ಯಕ್ತಿ ಮೃತ. ಅವರ ಕುಟುಂಬದವರು ಧನಂಜಯ ಅವರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ಸ್ಪಂದಿಸಿದ ಅವರು ಮಿತಿಲ ಜಾಧವ, ಸಾಯಿನಾಥ ಪಾಟೀಲ, ಲೋಕೇಶ ರಜಪೂತ, ಬಾಳು ಪಾಟೀಲ, ಪ್ರವೀಣ ಸಂತಾಜಿ ಮೊದಲಾದ ಕಾರ್ಯಕರ್ತರ ಜೊತೆ ಸೇರಿ ನೆರವಾಗಿದ್ದಾರೆ. ಶವ ಸಾಗಿಸುವ ವಾಹನದ ಉಚಿತ ಸೇವೆ ಒದಗಿಸಿ, ಕೋವಿಡ್ ನಿಯಮಗಳನ್ನು ಪಾಲಿಸಿ ಹಿಂದೂ ವಿಧಿ–ವಿಧಾನಗಳ ಪ್ರಕಾರ ಅಂಬೆವಾಡಿ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.