ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಪ್ರೊ.ಬಸವರಾಜ ಜಗಜಂಪಿ, ‘14ನೇ ಶತಮಾನದಲ್ಲಿ ಮೂಡಿ ಬಂದ ಶೂನ್ಯ ಸಂಪಾದನೆಯ ಮೊದಲ ಭಾಗವನ್ನು ನಾಟಕದ ರೂಪದಲ್ಲಿ ತಂದಿರುವುದು ಹೆಮ್ಮೆಯ ವಿಷಯ. ಅಧ್ಯಾತ್ಮವನ್ನು ನಾಟಕದ ಪಾತ್ರದಾರಿಗಳ ಮೂಲಕ ಸಮುದಾಯಕ್ಕೆ ತಲುಪಿಸುವ ಸಾಹಸವನ್ನು ಮೃತ್ಯುಂಜಯಸ್ವಾಮಿ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.