‘ಆತ ಅಜ್ಜಿಯ ಗ್ರಾಮವಾದ ಹುಕ್ಕೇರಿ ತಾಲ್ಲೂಕಿನ ಬಿದರೊಳ್ಳಿಗೆ ಬುಧವಾರ ಹೋದಾಗ ತೀವ್ರ ಜ್ವರ ಬಂದಿತ್ತು. ಅಂದು ಆ ಹಳ್ಳಿಗೆ ಬಂದಿದ್ದ ವೈದ್ಯರೊಬ್ಬರು 2 ಇಂಜೆಕ್ಷನ್ಗಳನ್ನು ಕೊಟ್ಟಿದ್ದರು. ಮರುದಿನ ಅಜ್ಜಿ ಜೊತೆ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಹೋಗಿದ್ದ. ಇಂಜೆಕ್ಷನ್ ಮಾಡಿದ್ದ ಸ್ಥಳದಲ್ಲಿ (ಚಪ್ಪೆ) ಕಪ್ಪಗಾಗಿ ಬಾತುಕೊಂಡಿತ್ತು. ನಂತರ ಕಾಲುಗಳೆರಡೂ ನಿತ್ರಾಣಗೊಂಡವು. ಕೂಡಲೇ ನಗರದ ಇಎಸ್ಐ ಆಸ್ಪತ್ರೆಗೆ ದಾಖಲಿಸಿದ್ದೆವು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ತಂದೆ ಭೀಮರಾವ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.