ಬೆಳಗಾವಿ: ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಭಾನುವಾರಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಉಡುಪಿಯ ವಾಹೀಲ್ ದಾದಾಪೀರ್ ದೇಸಾಯಿ (10) ಮೃತಪಟ್ಟ ಬಾಲಕ. ದಸರಾ ಹಬ್ಬಕ್ಕಾಗಿ ಬಾಲಕ ತನ್ನ ತಾಯಿಯ ತವರೂರಾದ ಕೆ.ಕೆ.ಕೊಪ್ಪ ಗ್ರಾಮಕ್ಕೆ ಬಂದಿದ್ದ. ಗೆಳೆಯರೊಂದಿಗೆ ಊರ ಹೊರಗಿನ ಹೊಂಡಕ್ಕೆ ಈಜಲು ಹೋಗಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.