ಮಂಗಳವಾರ ರಾತ್ರಿ ಇಬ್ಬರೂ ಪಾರ್ಟಿ ಮಾಡಿ ಮಧ್ಯ ಸೇವಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಯಿತು. ಇದು ವಿಕೋಪಕ್ಕೆ ತಿರುಗಿತು. ಅಡುಗೆ ಮನೆಯಲ್ಲಿದ್ದ ಚಾಕು ಎತ್ತಿಕೊಂಡು ಬಂದ ತಿಲಕನು ಚೇತನ್ ಹೊಟ್ಟೆ ಹಾಗೂ ಇತರ ಭಾಗಗಳಿಗೆ ಇರಿದ. ತೀವ್ರ ರಕ್ತಸ್ರಾವದಿಂದ ಚೇತನ್ ಕೊನೆಯುಸಿರೆಳೆದ ಎಂದು ಪೊಲೀಸರು ತಿಳಿಸಿದ್ದಾರೆ.