ಬೆಳಗಾವಿ ನಗರದ ಶಹಾಪುರದ ನಿಕಿತಾ ರಮೇಶ ಹದಗಲ್ (25) ಹಾಗೂ ಬಸಪ್ಪ ವೆಂಕಪ್ಪ ಹಳೇಮನಿ (34) ಅವರು ಮೃತರಾಗಿದ್ದಾರೆ. ಯಲ್ಲಮ್ಮನ ಜಾತ್ರೆ ಮುಗಿಸಿಕೊಡು ರಸ್ತೆಯ ಬದಿಯಿಂದ ಇವರು ನಡೆದುಕೊಂಡು ಹೋಗುತ್ತಿದ್ದಾಗ, ಹಿಂಬದಿಯಿಂದ ಬಸ್ ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಬಸ್ ಯಲ್ಲಮ್ಮನಗುಡ್ಡದಿಂದ ಧಾರವಾಡಕ್ಕೆ ಹೊರಟಿತ್ತು. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.