<p><strong>ಬೆಳಗಾವಿ</strong>: ಬೆಳಗಾವಿಯಲ್ಲಿ ಗುರುವಾರ ನಡೆದ ದಂಡು ಮಂಡಳಿ (ಕಂಟೋನ್ಮೆಂಟ್ ಬೋರ್ಡ್)ಯ ಸಾಮಾನ್ಯ ಸಭೆಯಲ್ಲಿ ತೀವ್ರ ಗೊಂದಲ ಉಂಟಾಗಿ, ಸಂಸದ ಜಗದೀಶ ಶೆಟ್ಟರ್ ಅವರು ಅಧ್ಯಕ್ಷರ ನಿಲುವನ್ನು ಖಂಡಿಸಿ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ.</p>.<p>ಸಭೆಯಲ್ಲಿ ಭಾಗವಹಿಸಿದ್ದ ಸಂಸದ, ‘ದಂಡುಮಂಡಳಿ ಪ್ರದೇಶದ ಸುಮಾರು 6,045 ಚದರ್ ಮೀಟರ್ ಭೂಮಿಯನ್ನು ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಗತ್ಯ ಪರವಾನಗಿ ಪಡೆಯದೆ ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.</p>.<p>‘ಈ ಕ್ರಮದಿಂದ ದಂಡು ಮಂಡಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸುವ ಸಾಧ್ಯತೆ ಇದೆ’ ಎಂದೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</p>.<p>‘ದಂಡುಮಂಡಳಿ ವ್ಯಾಪ್ತಿಯ ಭೂಮಿಯನ್ನು ಯಾವುದೇ ಉದ್ದೇಶಕ್ಕಾಗಿ ಹಂಚಿಕೆ ಮಾಡುವ ಮೊದಲು, ಸಂಬಂಧಿತ ಜನಪ್ರತಿನಿಧಿಗಳನ್ನು ವಿಶೇಷವಾಗಿ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಈ ಬಾರಿ ಗಮನಕ್ಕೆ ತರದೇ ಠರಾವು ಅಂಗೀಕರಿಸಿ ಟೆಂಡರ್ ಪ್ರಕ್ರಿಯೆ ನಡೆಸಿರುವುದು ಸರಿಯಲ್ಲ’ ಎಂದು ಶೆಟ್ಟರ್ ಆಕ್ಷೇಪಿಸಿದರು.</p>.<p>‘ಟೆಂಡರ್ ಪಡೆದ ವ್ಯಕ್ತಿ ಆ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಲಿದ್ದಾರೆ ಎಂಬುದನ್ನೂ ಪರಿಶೀಲಿಸದೆ, ಹಂಚಿಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಠರಾವನ್ನು ತಕ್ಷಣ ರದ್ದುಪಡಿಸಿ, ವಿಷಯವನ್ನು ಮರುಪರಿಶೀಲನೆಗಾಗಿ ಹೊಸ ಠರಾವು ರೂಪದಲ್ಲಿ ಸಭೆಗೆ ತರಬೇಕು’ ಎಂದು ಅಧ್ಯಕ್ಷರಿಗೆ ಸಲಹೆ ನೀಡಿದರು.</p>.<p>ಆದರೆ ದಂಡು ಮಂಡಳಿ ಅಧ್ಯಕ್ಷ ಅದನ್ನು ತಿರಸ್ಕರಿಸಿ, ಹಿಂದಿನ ಸಭೆಯಲ್ಲೇ ಅಂಗೀಕರಿಸಿದ ಠರಾವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ಆಗ ವಾಗ್ವಾದ ಉಂಟಾಗಿ ಪರಿಸ್ಥಿತಿ ಮತ್ತಷ್ಟು ಕಾವೇರಿತು. ಕೊನೆಗೆ ಅಧ್ಯಕ್ಷರ ಈ ನಿಲುವನ್ನು ಖಂಡಿಸಿದ ಶೆಟ್ಟರ್ ಅವರು ಸಭೆಯಿಂದ ಅರ್ಧಕ್ಕೆ ಹೊರನಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಬೆಳಗಾವಿಯಲ್ಲಿ ಗುರುವಾರ ನಡೆದ ದಂಡು ಮಂಡಳಿ (ಕಂಟೋನ್ಮೆಂಟ್ ಬೋರ್ಡ್)ಯ ಸಾಮಾನ್ಯ ಸಭೆಯಲ್ಲಿ ತೀವ್ರ ಗೊಂದಲ ಉಂಟಾಗಿ, ಸಂಸದ ಜಗದೀಶ ಶೆಟ್ಟರ್ ಅವರು ಅಧ್ಯಕ್ಷರ ನಿಲುವನ್ನು ಖಂಡಿಸಿ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ.</p>.<p>ಸಭೆಯಲ್ಲಿ ಭಾಗವಹಿಸಿದ್ದ ಸಂಸದ, ‘ದಂಡುಮಂಡಳಿ ಪ್ರದೇಶದ ಸುಮಾರು 6,045 ಚದರ್ ಮೀಟರ್ ಭೂಮಿಯನ್ನು ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಗತ್ಯ ಪರವಾನಗಿ ಪಡೆಯದೆ ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.</p>.<p>‘ಈ ಕ್ರಮದಿಂದ ದಂಡು ಮಂಡಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸುವ ಸಾಧ್ಯತೆ ಇದೆ’ ಎಂದೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</p>.<p>‘ದಂಡುಮಂಡಳಿ ವ್ಯಾಪ್ತಿಯ ಭೂಮಿಯನ್ನು ಯಾವುದೇ ಉದ್ದೇಶಕ್ಕಾಗಿ ಹಂಚಿಕೆ ಮಾಡುವ ಮೊದಲು, ಸಂಬಂಧಿತ ಜನಪ್ರತಿನಿಧಿಗಳನ್ನು ವಿಶೇಷವಾಗಿ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಈ ಬಾರಿ ಗಮನಕ್ಕೆ ತರದೇ ಠರಾವು ಅಂಗೀಕರಿಸಿ ಟೆಂಡರ್ ಪ್ರಕ್ರಿಯೆ ನಡೆಸಿರುವುದು ಸರಿಯಲ್ಲ’ ಎಂದು ಶೆಟ್ಟರ್ ಆಕ್ಷೇಪಿಸಿದರು.</p>.<p>‘ಟೆಂಡರ್ ಪಡೆದ ವ್ಯಕ್ತಿ ಆ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಲಿದ್ದಾರೆ ಎಂಬುದನ್ನೂ ಪರಿಶೀಲಿಸದೆ, ಹಂಚಿಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಠರಾವನ್ನು ತಕ್ಷಣ ರದ್ದುಪಡಿಸಿ, ವಿಷಯವನ್ನು ಮರುಪರಿಶೀಲನೆಗಾಗಿ ಹೊಸ ಠರಾವು ರೂಪದಲ್ಲಿ ಸಭೆಗೆ ತರಬೇಕು’ ಎಂದು ಅಧ್ಯಕ್ಷರಿಗೆ ಸಲಹೆ ನೀಡಿದರು.</p>.<p>ಆದರೆ ದಂಡು ಮಂಡಳಿ ಅಧ್ಯಕ್ಷ ಅದನ್ನು ತಿರಸ್ಕರಿಸಿ, ಹಿಂದಿನ ಸಭೆಯಲ್ಲೇ ಅಂಗೀಕರಿಸಿದ ಠರಾವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ಆಗ ವಾಗ್ವಾದ ಉಂಟಾಗಿ ಪರಿಸ್ಥಿತಿ ಮತ್ತಷ್ಟು ಕಾವೇರಿತು. ಕೊನೆಗೆ ಅಧ್ಯಕ್ಷರ ಈ ನಿಲುವನ್ನು ಖಂಡಿಸಿದ ಶೆಟ್ಟರ್ ಅವರು ಸಭೆಯಿಂದ ಅರ್ಧಕ್ಕೆ ಹೊರನಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>