ನೇಸರಗಿ: ಇಲ್ಲಿಗೆ ಸಮೀಪದ ಮೇಕಲಮರಡಿ ಕ್ರಾಸ್ ಬಳಿ ಬೆಳಗಾವಿ– ಬಾಗಲಕೋಟೆ ಹೆದ್ದಾರಿಯ ಸೇತುವೆಗೆ ಶುಕ್ರವಾರ ರಾತ್ರಿ ಕಾರೊಂದು ಗುದ್ದಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಥಣಿ ತಾಲ್ಲೂಕಿನ ಉಗಾರಖುರ್ದ ಗ್ರಾಮದ ಸಂತೋಷ ಮಾಳವಾಡಿ (22) ಹಾಗೂ ರಾಮದುರ್ಗ ತಾಲ್ಲೂಕಿನ ಸುನ್ನಾಳ ಗ್ರಾಮದ ಸಚಿನ ಮಾಳಿ(24) ಸಾವಿಗೀಡಾಗಿದ್ದಾರೆ. ಇವರು ಬೆಳಗಾವಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದರು. ಬಾಗಲಕೋಟೆಯಿಂದ ಬೆಳಗಾವಿಗೆ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.