ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವವಿಜ್ಞಾನ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತವಿಜ್ಞಾನ ವಿಷಯದ ಪರೀಕ್ಷೆ ನಡೆಯಿತು. ನಗರದ ಜ್ಯೋತಿ, ಜೆ.ಎ. ಸವದತ್ತಿ, ಎಂ.ಎಂ., ಲಿಂಗರಾಜ, ಆರ್ಎಲ್ಎಸ್, ಇಸ್ಲಾಮಿಯಾ, ಗೋಗಟೆ, ಗೋಮಟೇಶ, ಭರತೇಶ, ಸರ್ಕಾರಿ ಸರ್ದಾರ್ ಪಿಯು ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ನೋಂದಾಯಿಸಿದ್ದ 4,831 ವಿದ್ಯಾರ್ಥಿಗಳಲ್ಲಿ 3,749 ಮಂದಿ ಹಾಜರಾದರು. 1,082 ವಿದ್ಯಾರ್ಥಿಗಳು ಗೈರು ಹಾಜರಾದರು.