ಉದ್ಯಮಬಾಗ್ ಲಕ್ಷ್ಮಿನಗರದ ನಿವಾಸಿಗಳಾದ ದೀಪಕ ಅಗಸಿಮನಿ (21), ದೇವರಾಜ ಪೂಜಾರಿ (21), ನಾಗರಾಜ ತಳವಾರ (20) ಹಾಗೂ ಅಸ್ಲಂ ಶೇರೆಗಾರ (20) ಬಂಧಿತರು. ‘ಇವರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಖಡೇಬಜಾರ್-1, ಟಿಳಕವಾಡಿ-1, ಉದ್ಯಮಬಾಗ್-4, ಮಾಳಮಾರುತಿ-2 ಮತ್ತು ಅಂಕಲಗಿಯಲ್ಲಿ ಕಳವು ಮಾಡಿದ್ದಾಗಿ ಒಪ್ಪಿದ್ದಾರೆ’ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ತಿಳಿಸಿದ್ದಾರೆ.