ಬೆಳಗಾವಿ: ಕರ್ನಾಟಕ ಲೆದರ್ ಆರ್ಟಿಜನ್ಸ್ ಸಂಸ್ಥೆಯಿಂದ ಕೊಡಮಾಡುವ ‘ಚರ್ಮಶ್ರೀ ಪ್ರಶಸ್ತಿ’ಗೆ ಅಥಣಿ ತಾಲ್ಲೂಕು ಮದಭಾವಿ ಗ್ರಾಮದ ಮಾರುತಿ ಭಂಡಾರೆ ಅವರನ್ನು ಆಯ್ಕೆ ಮಾಡಲಾಗಿದೆ.
ಮಾರ್ಚ್ 24ರಂದು ಸಂಜೆ 5ಕ್ಕೆ ಶಹಾಪುರದ ನಾಥ ಪೈ ವೃತ್ತ ಸಮೀಪದ ಲೋಕಪ್ರಿಯ ಜನಸೇವಾ ಸಂಸ್ಥೆ ಆವರಣದಲ್ಲಿ ನಡೆಯುವ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.