ನಗರವಾಸಿಗಳಿಗೆ ತರಕಾರಿ ಪೂರೈಸಲು ಅವರ ಮನೆ ಬಾಗಿಲಿಗೆ ತೋಟಗಾರಿಕೆ ಇಲಾಖೆ, ಖಾಸಗಿ ಮತ್ತು ಎಪಿಎಂಸಿ ಅಧ್ಯಕ್ಷರು ಒಟ್ಟಾರೆ 40 ವಾಹನಗಳನ್ನು ಗುರುತಿಸಿ ವಾರ್ಡ್ಗಳಿಗೆ ಅನುಗುಣವಾಗಿ ಪ್ರತಿದಿನ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಗಟು ಹಸಿ ಮೆಣಸಿನಕಾಯಿ ಮಾರುವ ರೈತರು ಮತ್ತು ಖರೀದಿದಾರರ ಅನುಕೂಲಕ್ಕಾಗಿ ಕಿತ್ತೂರು ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮತ್ತು ಬೆಳಗಾವಿಯ ಎಪಿಎಂಸಿಯ ಜಾನುವಾರು ಮಾರುಕಟ್ಟೆ ಜಾಗದಲ್ಲಿ ವಹಿವಾಟು ನಡೆಸಲು ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿಯೇ ವಹಿವಾಟು ನಡೆಸಬೇಕು ಎಂದು ತಿಳಿಸಲಾಗಿದೆ.