ಬಡವರಿಗೆ ನೆರವು
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದರೂ ಆರ್ಥಿಕ ಸಮಸ್ಯೆಯಿಂದ ಕಾಲೇಜಿಗೆ ಹೋಗುವುದು ಕಷ್ಟ ಎನಿಸಿತ್ತು. ಪತ್ರಿಕೆಯು ನೆರವಿನಿಂದ ಕಲಬುರ್ಗಿಯಲ್ಲಿ ಕಾಲೇಜು ಸೇರಿದ್ದೇನೆ. ಸ್ವಲ್ಪ ಹಣ ಉಳಿಸಿಕೊಂಡು ಪುಸ್ತಕ ಖರೀದಿಸಿದೆ.
–ಆಕಾಶ ಜಗನ್ನಾಥ ಕಲ್ಲೂರ್, ತಾ. ಹುಮನಾಬಾದ್, ಬೀದರ್
ವಿದ್ಯಾಭ್ಯಾಸ ನಿಲ್ಲಿಸುವ ಹಂತದಲ್ಲಿದ್ದೆ...
ಆರ್ಥಿಕ ಸಂಕಷ್ಟದಿಂದಾಗಿ ವಿದ್ಯಾಭ್ಯಾಸವನ್ನೇ ಕಡಿತಗೊಳಿಸುವ ಹಂತದಲ್ಲಿದ್ದೆ. ‘ಪ್ರಜಾವಾಣಿ ಶೈಕ್ಷಣಿಕ ನೆರವು’ ನಿಧಿಯಿಂದ ಶಿಕ್ಷಣ ಮುಂದುವರಿಸಲು ಸಹಾಯ ಆಗಿದೆ. ಈಗ ಮೈಸೂರಿನಿಲ್ಲಿ ಕಾಲೇಜು ಸೇರಿದ್ದೇನೆ.