ತೆಲಸಂಗ: ‘ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು ತಮ್ಮ ಹಾಡುಗಳ ಮೂಲಕ ಸಂಗೀತ ರಸಿಕರ ಮನಸ್ಸಿನಲ್ಲಿ ಉಳಿದಿದ್ದಾರೆ’ ಎಂದು ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯ ಅಪ್ಪುರಾಜ ಭಜಂತ್ರಿ ಹೇಳಿದರು.
ಗ್ರಾಮದಲ್ಲಿ ಗೆಳೆಯರ ಬಳಗದಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘50 ವರ್ಷ ಗಾಯನ ಮತ್ತು ನಟನೆಯಲ್ಲಿ ತೊಡಗಿದ್ದ ಕಲಾ ಆರಾಧಕ ಅವರು. ಕಲಾವಿದರಿಗೆ ಅವರು ಮಾದರಿಯಾಗಿದ್ದಾರೆ’ ಎಂದರು.