‘ಹಿಂದೆ ಕರಾಡ– ಸತಾರ ಕ್ಷೇತ್ರದಿಂದ ಒಬ್ಬ ಅಂಗವಿಕಲ ವ್ಯಕ್ತಿ ಸಂಸದರಾಗಿ ಆಯ್ಕೆಯಾಗಿ ಬಂದಿದ್ದರು. ಅವರಿಗೆ ಮಾತನಾಡಲೂ ಬರುತ್ತಿರಲಿಲ್ಲ, ಸರಿಯಾಗಿ ನಡೆಯಲೂ ಬರುತ್ತಿರಲಿಲ್ಲ. ಹಾಗಿದ್ದ ಮೇಲೆ ಜನ ಏಕೆ ಆರಿಸಿ ಕಳುಹಿಸಿದ್ದಾರೆ ಎಂದು ಸ್ಪೀಕರ್ ಪ್ರಶ್ನೆ ಮಾಡಿದ್ದರು. ನಡೆಯಲೂ ಬಾರದ, ಮಾತನಾಡಲೂ ಬಾರದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಹೀಗೇ ಆಗುತ್ತದೆ’ ಎಂದು ಅವರು ಪ್ರಕಾಶ ಹುಕ್ಕೇರಿ ಅವರ ಹೆಸರು ಹೇಳದೇ ಮೂದಲಿಸಿದರು.