‘ನಕಲಿ ಸಿ.ಡಿ. ಆಗಿದ್ದರೆ ಯಾರೂ ಅದಕ್ಕೆ ಬಲಿಪಶು ಆಗುವುದು ಬೇಡ. ರಾಜಕಾರಣವೇ ಬೇರೆ. ಇಂತಹ ವಿಷಯಗಳೇ ಬೇರೆ. ಸಿ.ಡಿ. ಬಿಡುಗಡೆ ಆದಾಗ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಾವು ಆಗ್ರಹಿಸಿದ್ದೆವು; ಗೋಕಾಕದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದೆವು. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ. ಈಗ ‘ಷಡ್ಯಂತ್ರ ನಡೆದಿದೆ. ಸಿ.ಡಿ.ಯು ನಕಲಿ’ ಎಂದು ರಮೇಶ ಜಾರಕಿಹೊಳಿ ಹಾಗೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳುತ್ತಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯು ಸತ್ಯವನ್ನು ಬಹಿರಂಗಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಬೇಕು’ ಎಂದು ಕೋರಿದರು.