‘ಪತ್ನಿ, ಮಗಳು, ಇಬ್ಬರು ಅಳಿಯಂದಿರು ದೆಹಲಿಯಲ್ಲೆ ಇದ್ದಾರೆ. ಒಬ್ಬ ಮಗಳು ಡಾ.ಸ್ಫೂರ್ತಿ ಬೆಳಗಾವಿಯಲ್ಲಿದ್ದರು. ಅವರೊಂದಿಗೆ ಕುಟುಂಬದ ಕೆಲವರು ದೆಹಲಿಗೆ ವಿಮಾನದಲ್ಲಿ ಬಂದು ತಲುಪಲಿದ್ದಾರೆ. ಅವರೊಂದಿಗೆ ಆ ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಬಾಳಯ್ಯ ಸ್ವಾಮೀಜಿ ಕೂಡ ಬರುತ್ತಿದ್ದಾರೆ. ಲಿಂಗಾಯತ ವಿಧಿವಿಧಾನಗಳಂತೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಸುರಕ್ಷತಾ ಕ್ರಮಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.