‘ಲಕ್ಷ್ಮಿ ಹಾಗೂ ರಮೇಶನ ನಡುವಿನ ಸಂಬಂಧ ಪಾಂಡಪ್ಪ ಅವರಿಗೆ ಗೊತ್ತಾಗಿತ್ತು. ಇದರಿಂದ ಬೇಸತ್ತು ಪಾಂಡಪ್ಪ ಹೊಲದಲ್ಲಿ ಮನೆ ಮಾಡಿ ಪತ್ನಿ ಜತೆಗೆ ಅಲ್ಲಿಯೇ ವಾಸವಾಗಿದ್ದರು. ಆದರೂ ಇಬ್ಬರ ನಡುವಿನ ಸಂಬಂಧ ಮುಂದುವರಿದೇ ಇತ್ತು. ಇದಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಇಬ್ಬರೂ ಪಾಂಡಪ್ಪ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಭಾನುವಾರ ರಾತ್ರಿ 10ರ ಸುಮಾರಿಗೆ ಪಾಂಡಪ್ಪ ನಿದ್ರೆಗೆ ಜಾರಿದ ಮೇಲೆ, ಲಕ್ಷ್ಮಿಯು ರಮೇಶನನ್ನು ಕರೆಸಿಕೊಂಡಿದ್ದಳು. ಇಬ್ಬರೂ ಸೇರಿ ಕಲ್ಲು, ದೊಣ್ಣೆ, ಕುಡಗೋಲಿನಿಂದ ಹೊಡೆದು ಪಾಂಡಪ್ಪ ಅವರನ್ನು ಕೊಲೆ ಮಾಡಿದರು. ಅದನ್ನು ಅಪಘಾತ ಎಂದು ಬಿಂಬಿಸುವ ಸಲುವಾಗಿ ತಡರಾತ್ರಿ ಪಾಂಡಪ್ಪ ಅವರ ಬೈಕಿನಲ್ಲೇ ಶವವನ್ನು ತೆಗೆದುಕೊಂಡು ಹೋಗಿ, ಹೊಸೂರ ಹೊರವಲಯದ ಕಿರು ಸೇತುವೆ ಕೆಳಗೆ ಶವ ಹಾಗೂ ಬೈಕ್ ಬಿಸಾಡಿದ್ದರು’ ಎಂದು ಕಡಕೋಳ ಠಾಣೆ ಪೊಲೀಸರು ಪೊಲೀಸರು ತಿಳಿಸಿದ್ದಾರೆ.