ರಾಣಿ ಚನ್ನಮ್ಮ ನಗರದಲ್ಲಿ ಶಾಸಕ ಅಭಯ ಪಾಟೀಲ, ಸರ್ದಾರ್ ಮೈದಾನದಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಆಯಾ ಶಾಸಕರೇ ಮುಂದೆ ನಿಂತು ದಾಂಡಿಯಾ ಆಯೋಜನೆ ಮಾಡಿದ್ದಾರೆ. ಹಲವೆಡೆ ದಾಂಡಿಯಾ ಕ್ಲಬ್ಗಳು ತಲೆೆ ಎತ್ತಿದ್ದು, ಟಿಕೆಟ್ ಆಧಾರದಲ್ಲೂ ಸಂಭ್ರಮ ಹಂಚಲು ಮುಂದಾಗಿವೆ. ಶಾಹೂನಗರ, ಶಿವಾಜಿ ನಗರ, ಆಟೊ ನಗರ, ಹನುಮಾನ್ ನಗರ, ಅಜಂನಗರ, ಬಸವೇಶ್ವರ ನಗರ, ಟೀಚರ್ಸ್ ಕಾಲೊನಿ, ವಡಗಾವಿ, ಶಹಾಪುರ... ಹೀಗೆ ಸಂಜೆಯಾದರೆ ಸಾಕು ಇಡೀ ನಗರ ದಾಂಡಿಯಾ ದಂಡೇ ಕಾಣಿಸುತ್ತದೆ.