ರಾಜರಾಜೇಶ್ವರಿ ನಗರದಲ್ಲಿ ಮುಖ್ಯವಾಗಿ ಸಾರ್ವಜನಿಕ ಸ್ಥಳಗಳ ಬಗೆಗೆ ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ. ಯಾರ್ಯಾರೋ ಬಂದು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಖಾಲಿ ಇರುವ ಜಾಗಗಳನ್ನೆಲ್ಲಾ ಆಕ್ರಮಿಸಿಕೊಂಡರೆ ಮುಂದಿನ ಪೀಳಿಗೆಗೆ ಏನೂ ಉಳಿಯುವುದಿಲ್ಲ. ಖಾಲಿ ಜಾಗಗಳೇ ಇಲ್ಲದಂತಾಗಿ ಎಲ್ಲೆಲ್ಲೂ ಕಟ್ಟಡವೊಂದೇ ಕಾಣುವಂತಾಗುತ್ತದೆ. ಹಸಿರು ಹೆಚ್ಚಿಸುವ ಕೆಲಸ ಹೆಚ್ಚೆಚ್ಚು ಆಗಬೇಕು.