‘2020–21ನೇ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಮೊತ್ತವನ್ನು ತ್ವರಿತವಾಗಿ ಪಾವತಿಸಬೇಕು. ಕಾರ್ಖಾನೆಗಳಿಗೆ ಜನವರಿ ಅಂತ್ಯದವರೆಗೆ ಕಬ್ಬು ನೀಡಿದ ರೈತರಿಗೆ ಫೆ.25ರ ಒಳಗೆ ಹಣ ಪಾವತಿಸಿ ವರದಿ ನೀಡಬೇಕು. ಕಬ್ಬು ಕಟಾವು ತಂಡದವರು ಕಬ್ಬು ಕಟಾವು ಮಾಡಲು ಹೆಚ್ಚಿನ ಮೊತ್ತ ಬೇಡಿಕೆ ಇಡುತ್ತಿರುವುದಾಗಿ ದೂರುಗಳು ರೈತರಿಂದ ಬಂದಿವೆ. ಹೀಗಾಗಿ, ರೈತರಿಂದ ಹಣದ ಬೇಡಿಕೆ ಇಡದಂತೆ ಆ ತಂಡದವರಿಗೆ ಕಾರ್ಖಾನೆಗಳವರು ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ತಾಕೀತು ಮಾಡಿದರು.