‘ಹಲವು ಕಾರ್ಖಾನೆಗಳಿಂದ ಬಹಳಷ್ಟು ಬಾಕಿ ಕೊಡಿಸಲು ಅವರು ಕ್ರಮ ವಹಿಸಿದ್ದರು. ಆಡಳಿತ ಮಂಡಗಳಿಗಳ ಪ್ರತಿನಿಧಿಗಳ ಸಭೆ ನಡೆಸಿ, ಬಾಕಿ ಕೊಡದಿದ್ದಲ್ಲಿ ಸಕ್ಕರೆ ಜಪ್ತಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಅವರ ವರ್ಗಾವಣೆ ಹಿಂದೆ ಸಕ್ಕರೆ ಕಾರ್ಖಾನೆಗಳ ಲಾಬಿ ಕೆಲಸ ಮಾಡಿದೆ’ ಎಂದು ದೂರಿದ್ದರು. ‘ರೈತರ ಪರ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ತೊಂದರೆ ಕೊಡಬಾರದು’ ಎಂದು ಒತ್ತಾಯಿಸಿದ್ದರು.