‘ಹೋಬಳಿ, ವಲಯ ಮಟ್ಟದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ನು ರೈತರಿಗೆ ಸಕಾಲಕ್ಕೆ ತಲುಪಿಸಲು ಕೃಷಿ ಸಹಾಯಕರ ಹುದ್ದೆಗಳು ಅತಿ ಅವಶ್ಯವಾಗಿವೆ. ಕೃಷಿ ಹಾಗೂ ಕೃಷಿಗೆ ಪೂರಕವಾದ ವಿಷಯಗಳನ್ನು ಅಭ್ಯಾಸ ಮಾಡಿ ನಿರುದ್ಯೋಗಿಗಳಾಗಿರುವ ಕೃಷಿ ಡಿಪ್ಲೊಮಾ ಪದವೀಧರರನ್ನು ಪರಿಗಣಿಸಬೇಕು. ವೃಂದ ಹಾಗೂ ನೇಮಕಾತಿ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದು, ಸರ್ಕಾರದ ನೇರ ನೇಮಕಾತಿ ನಿಯಮಗಳ ಅನುಸಾರ ಕೃಷಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಈ ಮೂಲಕ 6ಸಾವಿರಕ್ಕೂ ಹೆಚ್ಚುಅಭ್ಯರ್ಥಿಗಳ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದರು.