ಸ್ಥಳೀಯ ನಿವಾಸಿ ಶ್ರೀನಿವಾಸ್ ಮಾತನಾಡಿ, ‘ಪುರಸಭೆಯಪಾರ್ಕಿನ ಜಾಗವು ಒತ್ತುವರಿಯಾಗಿರುವ ಅನುಮಾನಗಳಿವೆ. ಈ ಬಗ್ಗೆ
ಸರ್ವೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಕಾಂಪೌಂಡ್ ನಿಗದಿಗೊಳಿಸುವಂತೆ ಅನೇಕ ಬಾರಿ ಪುರಸಭೆಗೆ ಅರ್ಜಿಗಳು ಕೊಟ್ಟಿದ್ದರೂ ಇದುವರೆಗೂ ಸರ್ಕಾರಿ ಸ್ವತ್ತು ಉಳಿಸಿಕೊಳ್ಳುವಂತಹ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಒಂದು ದಿನವೂ ಮುಖ್ಯಾಧಿಕಾರಿಯಾಗಲಿ, ಎಂಜಿನಿಯರ್ಗಳಾಗಲಿ ಈ ಕಡೆಗೆ ಬಂದಿಲ್ಲ. ಈ ಪಾರ್ಕಿಗೆ ಗೇಟ್ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಹೆಣ್ಣು ಮಕ್ಕಳು ಓಡಾಡಲಿಕ್ಕೆ ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಪಾರ್ಕ್ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.