ಗಡಿನಾಡಿನಲ್ಲಿ ನಡೆಯುವ ರಾಜ್ಯೋತ್ಸವ ಅದ್ಧೂರಿಯಾಗಿರಬೇಕು ಎಂದು ಬಯಸಿ ಹಲವರು ಬೆಂಬಲ ನೀಡಿದ್ದಾರೆ. ಇದರಿಂದಾಗಿ, ಅಭಿಯಾನ ಸದ್ದು ಮಾಡಿದ್ದು, ಮಂಗಳವಾರ ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ನಲ್ಲಿ ಟಾಪ್ 5ರಲ್ಲಿತ್ತು. ಕರ್ನಾಟಕದಲ್ಲಿ ಸತತ 2 ಗಂಟೆವರೆಗೆ ಟಾಪ್ 1 ಸ್ಥಾನ ಪಡೆದುಕೊಂಡಿತ್ತು. ಸಾವಿರಾರು ಟ್ವೀಟ್ಗಳು ಬಂದಿವೆ. ಕನ್ನಡ ಅಭಿಮಾನಿಗಳು ಹಾಗೂ ನೆಟ್ಟಿಗರು ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮೆರವಣಿಗೆಗೆ ಅವಕಾಶ ಕೊಡುವಂತೆ ಆಗ್ರಹ ಮಂಡಿಸಿದ್ದಾರೆ.